Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ, ದಾವಣಗೆರೆಯಲ್ಲಿ ಆ.12 ರಂದು ಉಚಿತ ಮೂಳೆ ಮತ್ತು ಮಂಡಿ ತಪಾಸಣಾ ಶಿಬಿರ

---Advertisement---

​ಸುದ್ದಿಒನ್, ಚಿತ್ರದುರ್ಗ, ಆಗಸ್ಟ್ 10: ಬೆಂಗಳೂರಿನ ಖ್ಯಾತ ಅಸ್ಥಿ ತಜ್ಞರಾದ ಡಾ. ಪಿ. ಸಿ. ಜಗದೀಶ್ ಅವರಿಂದ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಆಗಸ್ಟ್ 12ರ ಬುಧವಾರದಂದು ಮೂಳೆ ಮತ್ತು ಮಂಡಿ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

​ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ದಾವಣಗೆರೆಯ ಹದಡಿ ರಸ್ತೆಯ ವಿದ್ಯಾರ್ಥಿ ಭವನ್ ಸರ್ಕಲ್ ಬಳಿ ಇರುವ ವಿಶ್ವಾಸ್ ಲೈಫ್‌ ಕೇರ್ ಹಾಗೂ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿರುವ (ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಿಂಭಾಗ) ಶ್ರೀ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಡಾ. ಪಿ. ಸಿ. ಜಗದೀಶ್ ಅವರು ಸಮಾಲೋಚನೆಗೆ ಲಭ್ಯವಿರುತ್ತಾರೆ.

 

​ಈ ಕೆಳಗಿನ ಸಮಸ್ಯೆಗಳಿಗೆ ತಜ್ಞರಿಂದ ಉಚಿತ ಸಮಾಲೋಚನೆ ಲಭ್ಯವಿರುತ್ತದೆ:

​ದೀರ್ಘಕಾಲದಿಂದ ಇರುವ ಸಂಧಿ ನೋವು

​ಎಲುಬು ಅಥವಾ ಸಂಧಿಯಲ್ಲಿ ಊತ ಅಥವಾ ಗಟ್ಟಿತನ

​ನಡೆಯಲು ಅಥವಾ ಮೆಟ್ಟಿಲೇರುವುದು ಕಷ್ಟವಾಗುವುದು

​ಎಲುಬು ಮುರಿತ ಮತ್ತು ಮಣಕಟ್ಟು (ಮುರಿದುಕೊಳ್ಳುವುದು/ಎಳೆತ)

​ಬೆನ್ನು ನೋವು ಅಥವಾ ಕುತ್ತಿಗೆ ನೋವು

​ಸಂಧಿ ಚಲನೆಯ ವೇಳೆ ಶಬ್ದ ಕೇಳಿಸುವುದು

​ಕ್ರೀಡಾ ಗಾಯಗಳ ಚಿಕಿತ್ಸೆ ಮತ್ತು ರೋಬೋಟಿಕ್ ಸಂಧಿ ಬದಲಾವಣೆ ಶಸ್ತ್ರಚಿಕಿತ್ಸೆ

​ಹಿರಿಯ ಸಲಹೆಗಾರ ಅಸ್ತಿ ಗಾಯ ತಜ್ಞ ಹಾಗೂ ರೋಬೋಟಿಕ್ ಸಂಧಿ ಬದಲಾವಣೆ ಶಸ್ತ್ರಚಿಕಿತ್ಸಕರಾದ ಡಾ. ಪಿ. ಸಿ. ಜಗದೀಶ್ (MBBS, D ORTHO, MS ORTHO, DNB, FASM (SA)) ಅವರ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ +91 94496 96954 ಸಂಖ್ಯೆಯನ್ನು ಸಂಪರ್ಕಿಸಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now