Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಡಿಕೆ ದರದಲ್ಲಿ ಮತ್ತೆ ಇಳಿಕೆ.. ಕೊಬ್ಬರಿ ಬೆಲೆ ಎಷ್ಟಿದೆ..?

---Advertisement---

ಅಡಿಕೆ ಬೆಳೆಗಾರರಿಗೆ ಮತ್ತೆ ನಿರಾಸೆಯಾಗಿದೆ. ದರದಲ್ಲಿ ಮತ್ತೆ ಇಳಿಕೆಯಾಗಿದೆ. 55 ಸಾವಿರಕ್ಕೆ ತಲುಪಿದ್ದ ಅಡಿಕೆ ದರ ಈಗ ಮತ್ತೆ ಐದು ಸಾವಿರ ಇಳಿಕೆಯಾಗಿದೆ. ಮಾರುಕಟ್ಟೆಯ ಸದ್ಯ ಬೆಲೆ ಕ್ವಿಂಟಾಲ್ ಅಡಿಕೆ 50 ಸಾವಿರ ರೂಪಾಯಿ ಆಗಿದೆ. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಿಕೆ ಧಾರಣೆ ಕನಿಷ್ಠ 47,600 ರೂಪಾಯಿ ಇದ್ದರೆ ಕನಿಷ್ಠ 48,000ಕ್ಕೆ ಮಾರಾಟವಾಗಿದೆ. ಇನ್ನು ಕೆಂಪುಗೋಟು ಅಡಿಕೆ ಧಾರಣೆ ಕ್ವಿಂಟಾಲ್ ಗೆ ಕನಿಷ್ಠ 28,600 ಇದ್ದರೆ ಗರಿಷ್ಠ 29,000 ಆಗಿತ್ತು.

ಚಿತ್ರದುರ್ಗದ ಅಪಿ ಅಡಿಕೆ ಕನಿಷ್ಠ ಬೆಲೆ 48,100 ರೂಪಾಯಿಗೆ ಮಾರಾಟವಾಗಿದೆ. ಹಾಗೆ ಬೆಟ್ಟೆ ಅಡಿಕೆ ಕನಿಷ್ಠ ಬೆಲೆ 35,100 ರೂಪಾಯಿಗೆ ಮಾರಾಟವಾಗಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 26,500 ರೂಪಾಯಿ ಇದ್ದು ಗರಿಷ್ಠ ಬೆಲೆ 50,199 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ ಕನಿಷ್ಠ 26,500 ರೂಪಾಯಿಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಕನಿಷ್ಠ 45,199 ರೂಪಾಯಿಗೆ ಮಾರಾಟವಾಗಿದೆ. ಹೊಸನಗರ ಚಾಲಿ ಅಡಿಕೆ ಕನಿಷ್ಠ 28,929 ರೂಪಾಯಿಗೆ ಮಾರಾಟವಾಗಿದೆ. ಕೆಂಪು ಗೋಟು ಅಡಿಕೆ 24,899 ರೂಪಾಯಿಗೆ ಮಾರಾಟವಾಗಿದೆ. ಹಾಗೇ ರಾಶಿ ಅಡಿಕೆ ಕನಿಷ್ಠ 47,699 ರೂಪಾಯಿಗೆ ಮಾರಾಟವಾಗಿದೆ.

ಕೊಬ್ಬರಿ ಬೆಲೆ ಸದ್ಯಕ್ಕೆ ರಾಜ್ಯದಲ್ಕಿ ಸ್ಥಿರತೆ ಕಾಯ್ದುಕೊಂಡಿದೆ. 10 ಸಾವಿರದ ಗಡಿ ದಾಟಿದ್ದ ಕೊಬ್ಬರಿ ಬೆಲೆ ಬಳಿಕ ಅಲ್ಪ ಕುಸಿತ ಕಂಡಿತ್ತು. ರಾಜ್ಯದ ಪ್ರಮುಖ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಕ್ವಿಂಟಾಲ್ ಗೆ ಕನಿಷ್ಠ 9,100 ರೂಪಾಯಿ ಇದ್ದರೆ ಕನಿಷ್ಠ 9,750 ರೂಪಾಯಿಗೆ ಮಾರಾಟವಾಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ 8,200 ರೂಪಾಯಿ ಇದ್ದು ಗರಿಷ್ಠ 9,510 ರೂಪಾಯಿಗೆ ಮಾರಾಟವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment