Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೊಂದ ಜೀವಿಗಳಿಗೆ ಯೋಗ ಒಂದು ವರದಾನ : ಮಹದೇವಿ.ಎಂ. ಮರಕಟ್ಟಿ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಜೂನ್.22 : ನೊಂದ ಜೀವಿಗಳಿಗೆ ಯೋಗ ಒಂದು ವರದಾನವಾಗಿದೆ. ಧ್ಯಾನಾಸಕ್ತ ಚಟುವಟಿಕೆಗಳು ಮನಸ್ಸಿಗೆ ಏಕಾಗ್ರತೆ, ನೆಮ್ಮದಿ, ಶಾಂತಿಯನ್ನು ನೀಡುತ್ತದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹದೇವಿ.ಎಂ. ಮರಕಟ್ಟಿ ತಿಳಿಸಿದರು.


ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹತ್ತು ದಿನಗಳ ಯೋಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಲ್ಕು ಗೋಡೆಗಳ ಬಂಧನದಿಂದ ಬೇಸತ್ತು ಕಾಲನೂಕುತ್ತಿರುವ ಖೈದಿ ಬಂಧುಗಳಿಗೆ ಗುಣಮಟ್ಟದ ಕೌಶಲ್ಯಾಧಾರಿತ ಉತ್ತಮ ಜೀವನಮೌಲ್ಯ ಬಿತ್ತುವ ಸರಳ ಆಸನಗಳ ಅಭ್ಯಾಸಗಳು ಮನಸ್ಸಿನ ಸದೃಢತೆಯನ್ನು ಗಟ್ಟಿಗೊಳಿಸುತ್ತವೆ. ಈ ಸಂದರ್ಭದಲ್ಲಿ ಪಡೆದ ಯೋಗ ತರಬೇತಿಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆಯಿತ್ತರು.

ಸಹಾಯಕ ಜೈಲರ್ ರಾಮಣ್ಣ ಹೇರ್‍ಕಲ್, ಶಿಕ್ಷಕ ಶ್ರೀರಾಮರೆಡ್ಡಿ ಹಾಗೂ ಮತ್ತಿತರ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯಾತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಮುರುಳಿ ನಿರ್ದೇಶನದಲ್ಲಿ ನೂರಕ್ಕೂ ಹೆಚ್ಚು ಖೈದಿ ಬಾಂಧವರು ಯೋಗಾಸನದ ಮಹತ್ವವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು.

ಫೋಟೋ ಮತ್ತು ವರದಿ ಕೃಪೆ
ಕೆಪಿಎಂ ಗಣೇಶಯ್ಯ, ಚಿತ್ರದುರ್ಗ
ಮೊ: 9448664878

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಜರಂಗದಳ ಸೇವಾ ಸಪ್ತಾಹ : ತರಳಬಾಳು ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿಒನ್, ಚಿತ್ರದುರ್ಗ, ಜೂನ್. 30 : ಬಜರಂಗದಳ ಸೇವಾ ಸಪ್ತಾಹದ ಅಂಗವಾಗಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ನಗರದ ಹೊರವಲಯದ ತಮಟಗಲ್ಲು ರಸ್ತೆಯಲ್ಲಿರುವ ತರಳಬಾಳು ನಗರದ ಕಡ್ಲೆಬಟ್ಟಿ ಬಳಿ ಭಾನುವಾರ ಉಚಿತ ಆರೋಗ್ಯ ತಪಾಸಣಾ

ಗಾಡಿಗಳಿಗೆ ದರ್ಶನ್ ಖೈದಿ ನಂಬರ್ : ಕೇಸ್ ಹಾಕುವ ಎಚ್ಚರಿಕೆ ನೀಡಿದ ಟ್ರಾಫಿಕ್ ಪೊಲೀಸರು..!

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಅವರಿಗೆ ಖೈದಿ ನಂಬರ್ 6106 ನೀಡಲಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಪೋರ್ಟ್ ಮಾಡುವುದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಈ ನಂಬರ್

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ : ಲಿಂಗಾಯತರಿಗೆ ನೀಡಲು ಒತ್ತಾಯ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನ ಬದಲಾವಣೆ, ಡಿಸಿಎಂ ಹುದ್ದೆಗಳ ಹೆಚ್ಚಳದ್ದೇ ಸುದ್ದಿಯಾಗಿದೆ. ಸಿಎಂ ಸ್ಥಾನ ಬದಲಾವಣೆಯ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಅಂತ ವೈಮನಸ್ಸಾಗಲಿ, ಒಬ್ಬರಿಗೊಬ್ಬರು ವಿರೋಧ ಹೇಳಿಕೆ

error: Content is protected !!