Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಳೆ, ಬೆಳೆ, ರಾಜಕೀಯದಲ್ಲಿ ಏನಾಗಲಿದೆ ಬದಲಾವಣೆ : ಯುಗಾದಿಯಂದು ಧಾರವಾಡದಲ್ಲಿ ಬೊಂಬೆಗಳು ನುಡಿದ ಭವಿಷ್ಯವೇನು..?

Facebook
Twitter
Telegram
WhatsApp

ಧಾರವಾಡ: ಕೆಲವೊಂದು ಕಡೆ ವಿಶೇಷತೆಯೂ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ. ರಾಜ್ಯದ ಭವಿಷ್ಯವನ್ನು ನುಡಿಯಲಾಗುತ್ತದೆ. ಇದೀಗ ಯುಗಾದಿಯಂದು ಧಾರವಾಡ ತಾಲೂಕಿನ ಹನುಮಕೊಪ್ಪದಲ್ಲಿ ಬೊಂಬೆಗಳು ಭವಿಷ್ಯ ನುಡಿಯಲಿವೆ. ಆ ಭವಿಷ್ಯದ ಮೇಲೆ ಎಲ್ಲರ ಗಮನವಿರುತ್ತದೆ. ಈ ಬಾರಿಯ ಯುಗಾದಿಯಂದು ಭವಿಷ್ಯ ನುಡಿಯಲಾಗಿದೆ. ರಾಜಕೀಯ, ಮಳೆ, ಬೆಳೆ ಬಗ್ಗೆ ಭವಿಷ್ಯ ನುಡಿಯಲಾಗಿದೆ.

 

ಈ ಬಾರಿಯೂ ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿಯೇ ಆಗಲಿದೆ. ಹಿಂಗಾರು ಮಳೆ ಕೂಡ ಕೈ ಕೊಡಲಿದೆ ಎಂದಿವೆ. ಇದನ್ನು ಕೇಳಿದ ರೈತರಿಗೆ ಬೇಸರವಾಗಿದೆ. ಯಾಕಂದ್ರೆ ಈ ಬಾರಿಯಾದರೂ ಒಳ್ಳೆಯ ಮಳೆ ಬೆಳೆ ಆಗುತ್ತದೆ ಎಂದೇ ನಂಬಲಾಗಿತ್ತು. ಇದೀಗ ಬೊಂಬೆಗಳ ಭವಿಷ್ಯ ಆತಂಕಕ್ಕರ ದೂಡಿದೆ. ಇದೇ ವೇಳೆ ರಾಜಕೀಯದ ವಿಚಾರವಾಗಿಯೂ ಭವಿಷ್ಯ ನುಡಿದಿದ್ದು, ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗುವುದಿಲ್ಲ ಎಂಬ ಭವಿಷ್ಯ ನುಡಿದಿದೆ.

ಹನುಮಕೊಪ್ಪ ಗ್ರಾಮದಲ್ಲಿ ಯುಗಾದಿಯ ಅಮಾವಾಸ್ಯೆಯಂದು ಹಳ್ಳದಲ್ಲಿ ಗೊಂಬೆಗಳನ್ನು ಕಟ್ಟಲಾಗುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಕಟ್ಟಲಾಗುತ್ತದೆ. ಬಲಿಪಾಡ್ಯಮಿಯ ದಿನ ಹಿರಿಯರು ಬಂದು ಆ ಗೊಂಬೆಗಳನ್ನು ಅವಲೋಕಿಸುತ್ತಾರೆ. ಆ ಗೊಂಬೆಗಳನ್ನು ನೋಡಿದಾಗ ರೈತರ ಜೀವನ, ಮಳೆ ಬೆಳೆ ಬಗ್ಗೆ, ರಾಜಕೀಯದ ಬಗ್ಗೆ ಭವಿಷ್ಯವನ್ನು ತಿಳಿಯುತ್ತಾರೆ. ಈ ಬಾರಿ ರಾಜಕೀಯ ಗೊಂಬೆ ಯಾವುದೇ ರೀತಿಯಲ್ಲೂ ಬದಲಾವಣೆಯಾಗಿರಲಿಲ್ಲ. ಗೊಂಬೆಗಳ ಅಂಗಾಗಕ್ಕೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಅರ್ಥ. ಆದರೆ ಈ ಬಾರಿ ಯಾವುದೇ ವ್ಯತ್ಯಾಸವಾಗಿಲ್ಲದ ಕಾರಣ ರಾಜಕೀಯದಲ್ಲಿ ಬದಲಾವಣೆ ಇಲ್ಲ ಎಂದೇ ನಂಬಲಾಗಿದೆ. 1936ರಿಂದಾನೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಾಗೇ ಎಷ್ಟೋ ಘಟನೆಗಳು ಸತ್ಯವಾಗಿದೆ ಅಂತೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!