Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಲಗಿದ್ದವರು ಎದ್ದಿಲ್ಲ : ಅತ್ತಿಗೆ ಸಾವಿನ ಬಗ್ಗೆ ಶ್ರೀಮುರುಳಿ ಕಣ್ಣೀರು

Facebook
Twitter
Telegram
WhatsApp

 

ಬೆಂಗಳೂರು: ಪತ್ನಿ ಸ್ಪಂದನಾ ಜೊತೆಗೆ ವಿಜಯ್ ರಾಘವೇಂದ್ರ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ನಿನ್ನೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ಬೆಳಗ್ಗೆ ಸ್ಪಂದನಾ ಸ್ಥಿತಿ ಗಂಭೀರವಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ ನಲ್ಲಿಯೇ ಸ್ಪಂದನಾ ಮೃತದೇಹದ ಪೋಸ್ಟ್ ಮಾಟಂ ಮಾಡಲಾಗುತ್ತಿದೆ. ಥೈಲ್ಯಾಂಡ್ ನಲ್ಲಿ ವೈದ್ಯಕೀಯ ಕಾರ್ಯವಿಧಾನ ಮುಗಿಸಿ ನಾಳೆ ಬೆಂಗಳೂರಿಗೆ ಮೃತದೇಹ ಬರುವ ಸಾಧ್ಯತೆ ಇದೆ.

ಮಲ್ಲೇಶ್ವರಂನಲ್ಲಿವ ಸ್ಪಂದನಾ ತಂದೆ ಬಿಕೆ ಶಿವರಾಮ್ ಮನೆಯಲ್ಲಿ ಮುರುಳಿ ಮತ್ತು ಸ್ಪಂದನಾ ಮಗ ಶೌರ್ಯ ಇದ್ದಾರೆ‌‌. ವಿಷಯ ತಿಳಿದು ಆತಂಕಗೊಂಡಿದ್ದಾರೆ. ಮನೆಯವರಿಗೆ ಸಮಧಾನ ಮಾಡುವುದಕ್ಕೆ ರಾಜಕೀಯ ಗಣ್ಯರು ಆಗಮಿಸಿದ್ದಾರೆ. ಈಗಾಗಲೇ ಬಿಕೆ ಹರಿಪ್ರಸಾದ್, ಮುನಿರತ್ನ ಅವರು ಮನೆಗೆ ಬಂದು ಸಾಂತ್ವಾನ ಹೇಳಿದ್ದಾರೆ.

ಅತ್ತಿಗೆ ಸಾವಿನ ಬಗ್ಗೆ ಶ್ರೀ ಮುರುಳಿ ಮಾತನಾಡಿದ್ದು, ಅಣ್ಣಾ ಫೋನ್ ಮಾಡಿ ಹೇಳಿದ್ರು. ಮಲಗಿದ್ದೋರು ಎದ್ದೇಳಿಲ್ಲ. ಲೋ ಬಿಪಿ ಅಂತಾ ತಿಳಿದಿದೆ. ಸಾವು ಆಗಿರಯವುದು ನಿಜ. ಬೇರೆನೂ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ಏನೂ ಹೇಳುವುದಕ್ಕೆ ಈಗ ಆಗುತ್ತಿಲ್ಲ. ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ ಎಂದಿದ್ದಾರೆ.

ಇನ್ನು ಸ್ಪಂದನಾ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಮಾತನಾಡಿ, ಸ್ಪಂದನ ತನ್ನ ಕಸಿನ್ಸ್‌ ಜೊತೆ ಟ್ರಿಪ್ ಹೋಗಿದ್ರು. ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದಿಲ್ಲ. ರಾತ್ರಿನೇ ವಿಷಯ ಗೊತ್ತಾ ಆಯ್ತು. ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ ವಿಷಯ ಗೊತ್ತಾಗುತ್ತೆ. ಯಾವುದೇ ರೀತಿ ಊಹಾಪೋಹಾಗಳನ್ನು ಹಬ್ಬಿಸಬೇಡಿ. ನಾನು ಬ್ಯಾಂಕಾಕ್‌ಗೆ ಹೋಗ್ತೀನಿ. ಪೋಸ್ಟ್ ಮಾರ್ಟಂ ಆದ ನಂತರ ನಾಳೆ ಮೃತದೇಹ ಬರುತ್ತೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

High Blood Pressure : ಅಧಿಕ ರಕ್ತದೊತ್ತಡ ಎಷ್ಟು ಅಪಾಯಕಾರಿ ಗೊತ್ತಾ ?

ಸುದ್ದಿಒನ್ : ಅಧಿಕ ರಕ್ತದೊತ್ತಡ ಎನ್ನುವುದು ಒಂದು ರೀತಿಯ ಸೈಲೆಂಟ್ ಕಿಲ್ಲರ್ ಇದ್ದಂತೆ. ಈ ಸಮಸ್ಯೆ ಇದ್ದರೆ ಪ್ರತಿದಿನ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಳ್ಳಬೇಕು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು?

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು? ಮಂಗಳವಾರ ರಾಶಿ ಭವಿಷ್ಯ -ಮೇ-21,2024 ನರಸಿಂಹ ಜಯಂತಿ ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!