Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಲಗಿದ್ದವರು ಎದ್ದಿಲ್ಲ : ಅತ್ತಿಗೆ ಸಾವಿನ ಬಗ್ಗೆ ಶ್ರೀಮುರುಳಿ ಕಣ್ಣೀರು

Facebook
Twitter
Telegram
WhatsApp

 

ಬೆಂಗಳೂರು: ಪತ್ನಿ ಸ್ಪಂದನಾ ಜೊತೆಗೆ ವಿಜಯ್ ರಾಘವೇಂದ್ರ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ನಿನ್ನೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ಬೆಳಗ್ಗೆ ಸ್ಪಂದನಾ ಸ್ಥಿತಿ ಗಂಭೀರವಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ ನಲ್ಲಿಯೇ ಸ್ಪಂದನಾ ಮೃತದೇಹದ ಪೋಸ್ಟ್ ಮಾಟಂ ಮಾಡಲಾಗುತ್ತಿದೆ. ಥೈಲ್ಯಾಂಡ್ ನಲ್ಲಿ ವೈದ್ಯಕೀಯ ಕಾರ್ಯವಿಧಾನ ಮುಗಿಸಿ ನಾಳೆ ಬೆಂಗಳೂರಿಗೆ ಮೃತದೇಹ ಬರುವ ಸಾಧ್ಯತೆ ಇದೆ.

ಮಲ್ಲೇಶ್ವರಂನಲ್ಲಿವ ಸ್ಪಂದನಾ ತಂದೆ ಬಿಕೆ ಶಿವರಾಮ್ ಮನೆಯಲ್ಲಿ ಮುರುಳಿ ಮತ್ತು ಸ್ಪಂದನಾ ಮಗ ಶೌರ್ಯ ಇದ್ದಾರೆ‌‌. ವಿಷಯ ತಿಳಿದು ಆತಂಕಗೊಂಡಿದ್ದಾರೆ. ಮನೆಯವರಿಗೆ ಸಮಧಾನ ಮಾಡುವುದಕ್ಕೆ ರಾಜಕೀಯ ಗಣ್ಯರು ಆಗಮಿಸಿದ್ದಾರೆ. ಈಗಾಗಲೇ ಬಿಕೆ ಹರಿಪ್ರಸಾದ್, ಮುನಿರತ್ನ ಅವರು ಮನೆಗೆ ಬಂದು ಸಾಂತ್ವಾನ ಹೇಳಿದ್ದಾರೆ.

ಅತ್ತಿಗೆ ಸಾವಿನ ಬಗ್ಗೆ ಶ್ರೀ ಮುರುಳಿ ಮಾತನಾಡಿದ್ದು, ಅಣ್ಣಾ ಫೋನ್ ಮಾಡಿ ಹೇಳಿದ್ರು. ಮಲಗಿದ್ದೋರು ಎದ್ದೇಳಿಲ್ಲ. ಲೋ ಬಿಪಿ ಅಂತಾ ತಿಳಿದಿದೆ. ಸಾವು ಆಗಿರಯವುದು ನಿಜ. ಬೇರೆನೂ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ಏನೂ ಹೇಳುವುದಕ್ಕೆ ಈಗ ಆಗುತ್ತಿಲ್ಲ. ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ ಎಂದಿದ್ದಾರೆ.

ಇನ್ನು ಸ್ಪಂದನಾ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಮಾತನಾಡಿ, ಸ್ಪಂದನ ತನ್ನ ಕಸಿನ್ಸ್‌ ಜೊತೆ ಟ್ರಿಪ್ ಹೋಗಿದ್ರು. ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದಿಲ್ಲ. ರಾತ್ರಿನೇ ವಿಷಯ ಗೊತ್ತಾ ಆಯ್ತು. ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ ವಿಷಯ ಗೊತ್ತಾಗುತ್ತೆ. ಯಾವುದೇ ರೀತಿ ಊಹಾಪೋಹಾಗಳನ್ನು ಹಬ್ಬಿಸಬೇಡಿ. ನಾನು ಬ್ಯಾಂಕಾಕ್‌ಗೆ ಹೋಗ್ತೀನಿ. ಪೋಸ್ಟ್ ಮಾರ್ಟಂ ಆದ ನಂತರ ನಾಳೆ ಮೃತದೇಹ ಬರುತ್ತೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!