Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಮೇ.10 ಮತ್ತು 13 ರಂದು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಮಾಹಿತಿ ಇಲ್ಲಿದೆ

---Advertisement---

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಮೇ.08) : ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.10 ರಂದು ನಡೆಯಲಿರುವ ಮತದಾನ ಹಾಗೂ ಮೇ.13 ರ ಮತ ಎಣಿಕೆ ಕಾರ್ಯಕ್ಕಾಗಿ 5 ಡಿಎಸ್‍ಪಿ(ಉಪ ಪೊಲೀಸ್ ವರಿಷ್ಠಾಧಿಕಾರಿ ), 18 ಸಿಪಿಐ (ವೃತ್ತ ನಿರೀಕ್ಷರು), 57 ಪಿ.ಎಸ್.ಐ (ಪೊಲೀಸ್ ಸಬ್  ಇನ್ಸ್‍ಪೆಕ್ಟರ್), 134 ಎ.ಎಸ್.ಐ(ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್), 955 ಪಿ.ಸಿ.(ಕಾನ್ಸಟೇಬಲ್), 600 ಗೃಹರಕ್ಷರನ್ನು ಚಿತ್ರದುರ್ಗ ಜಿಲ್ಲೆಯಿಂದ ನೇಮಿಸಲಾಗಿದೆ.

1 ಡಿಎಸ್‍ಪಿ, 5 ಸಿಪಿಐ, 4 ಪಿ.ಎಸ್.ಐ, 61 ಎ.ಎಸ್.ಐ , 268ಪಿ.ಸಿ, 100 ಗೃಹರಕ್ಷರನ್ನು ಹೊರ ಜಿಲ್ಲೆಯಿಂದ ನೇಮಿಸಲಾಗಿದೆ.

ಇದರೊಂದಿಗೆ 14 ಸಿಎಪಿಎಫ್ (ಕೇಂದ್ರ ಸಶಸ್ತ್ರ ದಳ) ಹಾಗೂ 6 ಕೆ.ಎಸ್.ಆರ್.ಪಿ (ಸಶಸ್ತ್ರ ಮೀಸಲು ಪಡೆ) ತುಕಡಿಗಳನ್ನು ಬಂದೋಬಸ್ತ್ ಕಾರ್ಯ ನಿಯೋಜಿಸಲಾಗಿದೆ.

ಮೇ.13 ರಂದು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟದಲ್ಲಿ ಜರುಗುವ ಮತ ಎಣಿಕೆ ಕಾರ್ಯಕ್ಕೆ 1 ಡಿಎಸ್‍ಪಿ, 1 ಸಿಪಿಐ, 4 ಪಿ.ಎಸ್.ಐ, 9 ಎಸ್.ಎಸ್.ಐ, 17 ಹೆಚ್.ಸಿ (ಹೆಡ್ ಕಾನ್ಸ್ ಟೇಬಲ್), 20 ಪಿ.ಸಿ ಹಾಗೂ 2 ಸಿಎಪಿಎಫ್ ಹಾಗೂ 1 ಕೆ.ಎಸ್.ಆರ್.ಪಿ, 2 ಡಿಎಆರ್(ಜಿಲ್ಲಾ ಸಶಸ್ತ್ರ ಪಡೆ) ತುಕಡಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಮಾಹಿತಿ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...