ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ನಗರದ ಜೆ.ಸಿ.ಆರ್ ಬಡಾವಣೆ 5ನೇ ಕ್ರಾಸ್ ನಿವಾಸಿ ಕೆ.ಮಂಜುನಾಥ್ (64 ವರ್ಷ) ಶನಿವಾರ ಸಂಜೆ ನಿಧನರಾದರು. ಮೃತರು ಓರ್ವ ಪುತ್ರಿ,ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಭಾನುವಾರ ಮಧ್ಯಾಹ್ನ 1:00 ಗಂಟೆಗೆ ಆಯಿತೋಳು ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
















