Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೈತರ ಸಾಲ ಮನ್ನಾ ಮಡಿದ್ದು ನಾನು ಅವರಲ್ಲ : ಸಿದ್ದರಾಮಯ್ಯ

Facebook
Twitter
Telegram
WhatsApp

ಬೆಳಗಾವಿ: ಜಿಲ್ಲೆಗೆ ಭೇಟಿ ನೀಡಿ, ಸಂಗೊಳ್ಳಿರಾಯಣ್ ಅವರ ಬಗ್ಗೆ ಜಿಲ್ಲೆಯ ಜನತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ನೀವೆಷ್ಟು ಜನ ಸಂಗೊಳ್ಳಿ ಹೋಗಿದ್ರಿ ಅಂತ ಗೊತ್ತಿಲ್ಲ. ಹೋಗಿದ್ದೀರಾ ಯಾರಾದ್ರು..? ಎಷ್ಟು ಜನ ಹೋಗಿದ್ರಿ ಕೈ ಎತ್ತಿ ನೋಡೋಣಾ..? ಅಲ್ಲಿ ಏನು ನಡೀತಾ ಇದೆ ಹೇಳಿ ನೋಡೋಣಾ..? ಎಂದು ನೆರೆದಿದ್ದವರನ್ನು ಕೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಾನು ನೂರು ಎಕರೆ ಜಮೀನು ಕೊಟ್ಟು ಸಂಗೊಳ್ಳಿ ರಾಯಣ್ಣ ಅವರ ಹೆಸರಲ್ಲಿ ಸೈನಿಕ ಶಾಲೆ ಮಾಡುವುದಕ್ಕೆ, ರಾಕ್ ಗಾರ್ಡನ್ ಮಾಡುವುದಕ್ಕೆ, ಮ್ಯೂಸಿಯಂ ಮಾಡುವುದಕ್ಕೆ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿ, ಅಭಿವಪಡಿಸಿ, ಅದೊಂದು ಟೂರಿಸಂ ಸೆಂಟರ್ ಆಗ್ಬೇಕು ಅಂತ ಆ ಯೋಜನೆ ಮಾಡಿ ನಾನೇ ಶಂಕು ಸ್ಥಾಪನೆ ಮಾಡಿ ಬಂದೆ. ಅದು ಕೆಲಸ ನಡೆಯುತ್ತಾ ಇದೆ.

ಅದು ಒಂದು ಪ್ರವಾಸೋದ್ಯಮ ಕೇಂದ್ರವಾಗಬೇಕು, ಎಲ್ಲರು ಹೋಗಿ ನೋಡಬೇಕು. ಸಂಗೊಳ್ಳಿರಾಯಣ್ಣ ಅವರು ಹುಟ್ಟಿದಾಗಿನಿಂದ ಅವರನ್ನು ನೇಣು ಹಾಕಿದ್ರಲ್ಲ ಅಲ್ಲಿವರೆಗೂ ಅವರ ಬದುಕು ಇರುತ್ತದೆ. ಅವರ ಸಾಧನೆ ಇರುತ್ತದೆ. ನೀವೆಲ್ಲಾ ಸಂಗೊಳ್ಳಿಗೆ ಹೋಗಿ ನೋಡಬೇಕು. ಸಂಗೊಳ್ಳಿ ಇರುವುದು ಬೈಲವಂಗಲ, ಅವರನ್ನು ನೇಣು ಹಾಕಿದ ಜಾಗ ಇರುವುದು ಖಾನಾಪುರ. ಸಂಗೊಳ್ಳಿ ರಾಯಣ್ಣ ಅವರಿಂದ ದೇಶಭಕ್ತಿ, ದೇಶಪ್ರೆಮ, ದೇಶಕ್ಕೋಸ್ಕರ ಮುಡಿಪಾಗಿಡುವಂತ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಇರಬಹುದು, ಬಸವರಾಜ್ ಬೊಮ್ಮಾಯಿ‌ ಇರಬಹುದು, ಜಗದೀಶ್ ಶೆಟ್ಟರ್ ಇರಬಹುದು, ಸದಾನಂದ ಗೌಡ ಇರಬಹುದು ಒಂದು ರೂಪಾಯಿ ಮನ್ನಾ ಮಾಡಿರುವುದನ್ನು ತೋರಿಸಲಿ ನೋಡೋಣಾ. ನಾನು ಐದು ವರ್ಷದಲ್ಲಿ ಬರೀ ನೇಕಾರರ ಸಾಲ ಮನ್ನಾ ಮಾಡಲಿಲ್ಲ. ಎಲ್ಲಾ ರೈತರ ಸಾಲ ಐವತ್ತು ಸಾವಿರ ರೂಪಾಯಿವರೆಗೆ ಸಂಪೂರ್ಣ ಮನ್ನ ಮಾಡುವಂತೆ ಮಾಡಿದ್ದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!