ರಾಮನಗರ.ಆಗಸ್ಟ್.9: ಬಿಡದಿ ಟೌನ್ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಜೆಡಿಎಸ್ ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಪಾದಯಾತ್ರೆ ನಡೆಯಲಿದೆ.
ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಪ್ರತಿಭಟನಾ ಮೆರವಣಿಗೆ ಆಯೋಜನೆಯಾಗಿದೆ. ಇಂದು ಬೆಳಿಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಪಾದಯಾತ್ರೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ನಮ್ಮ ಭೂಮಿ – ನಮ್ಮ ಹಕ್ಕು
ಬಿಡದಿ ಟೌನ್ ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪಾದಯಾತ್ರೆ.
ದಿನಾಂಕ 09-08-2026, ಭಾನುವಾರದ ಪಾದಯಾತ್ರೆಯ ಮಾರ್ಗದ ವಿವರ. pic.twitter.com/kJI27fwvks
— Nikhil Kumar (@Nikhil_Kumar_k) August 7, 2026
ಮೊದಲ ದಿನದ ಪಾದಯಾತ್ರೆಯು ಭೈರಮಂಗಲ ಗ್ರಾಮದಿಂದ ಶುರುವಾಗಿ, ಒಟ್ಟು 9 ಕಿಲೋಮೀಟರ್ ಕ್ರಮಿಸಲಿದೆ. ಈ ಹಾದಿಯು ತಿಮ್ಮೇಗೌಡನದೊಡ್ಡಿ, ವೃಷಭಾವತಿಪುರ ಹಾಗೂ ಅಬ್ಬನಕುಪ್ಪೆ ಮಾರ್ಗವಾಗಿ ಸಾಗಲಿದೆ. ಜೋಗರದೊಡ್ಡಿಯಲ್ಲಿ ಮಧ್ಯಾಹ್ನದ ಭೋಜನ ಹಾಗೂ ವಿಶ್ರಾಂತಿ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಮೇಡನಹಳ್ಳಿ, ಭೈರಮಂಗಲ ಕ್ರಾಸ್ ಮತ್ತು ಬಿಜಿಎಸ್ ವೃತ್ತದ ಮೂಲಕ ಸಾಗಿ ಬಿಡದಿಯಲ್ಲಿ ಇಂದಿನ ನಡಿಗೆ ಮುಕ್ತಾಯಗೊಳ್ಳಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಹೋರಾಟಗಾರರು ರಾತ್ರಿ ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಂಗಲಿದ್ದಾರೆ.

ಈ ಬೃಹತ್ ಪ್ರತಿಭಟನೆಯಲ್ಲಿ ಜೆಡಿಎಸ್ನ ಹಾಲಿ ಹಾಗೂ ಮಾಜಿ ಶಾಸಕರು, ಎಂಎಲ್ಸಿಗಳು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎನ್ಡಿಎ ಮೈತ್ರಿಕೂಟದ ಭಾಗವಾಗಿ ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಕೂಡ ಜೆಡಿಎಸ್ ನಾಯಕರೊಂದಿಗೆ ಹೆಜ್ಜೆ ಹಾಕಿ ಬೆಂಬಲ ಸೂಚಿಸಲಿದ್ದಾರೆ.
ನಮ್ಮ ಭೂಮಿ, ನಮ್ಮ ಹಕ್ಕು!
ಆಗಸ್ಟ್ 9, 10 ಮತ್ತು 11, 2026
ಭೈರಮಂಗಲ ದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಕುಮಾರಣ್ಣನವರು ಮನವಿ ಮಾಡಿದ್ದಾರೆ.ನನ್ನ ಪ್ರೀತಿಯ ರೈತ ಬಾಂಧವರೇ, ತಾಯಂದಿರೆ,… pic.twitter.com/v5HAlyUuHV
— Nikhil Kumar (@Nikhil_Kumar_k) August 5, 2026













