Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ನಾಗರಾಜ್ ಬೆಳಗಟ್ಟ ಅವಿರೋಧ ಆಯ್ಕೆ

---Advertisement---

ಸುದ್ದಿಒನ್, ಚಳ್ಳಕೆರೆ, ಜುಲೈ. 07 : ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆಯ ಇಂಗ್ಲಿಷ್ ಉಪನ್ಯಾಕ ನಾಗರಾಜ್ ಬೆಳಗಟ್ಟ ರವರನ್ನು ಜಿಲ್ಲಾ ಸಮಿತಿ, ತಾಲೂಕಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅವಿರೋಧವಾಗಿ ಆಯ್ಕೆ ಮಾಡಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆದ ಸಭೆಯಲ್ಲಿ
ಲೋಕೇಶ್. ಎನ್, ಪ್ರಧಾನ ಕಾರ್ಯದರ್ಶಿಯಾಗಿ,
ನರಸಿಂಹಪ್ಪ ಖಜಾಂಚಿಯಾಗಿ,
ಯಶವಂತ ನಾಯ್ಕ್.ಎಲ್ ಕಾರ್ಯದರ್ಶಿಯಾಗಿ,
ಶ್ರೀಮತಿ ಶಾಂತಕುಮಾರಿ .ಬಿ ಉಪಾಧ್ಯಕ್ಷರಾಗಿ ( ಮಹಿಳೆ) ಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಪ್ರಾಚಾರ್ಯರುಗಳಾದ ಕುಮಾರಸ್ವಾಮಿ,, ಭೀಮಾರೆಡ್ಡಿ, ಶ್ರೀಮಂತಕುಮಾರ್, ಚಂದ್ರಣ್ಣ, ಸೋಮಶೆಖರ್ , ಜಿಲ್ಲಾ ಸಮಿತಿಯ ಪರವಾಗಿ ಎಸ್.ಉಮೇಶ್ ಉಪನ್ಯಾಸಕರು, ಹಾಗೂ ತಾಲ್ಲೂಕಿನ ನೌಕರ ಸಂಘದ ನಿರ್ದೇಶಕರಾದ ಶ್ರೀನಿವಾಸ.ಎಂ, ಜಬೀವುಲ್ಲಾ, ಮಲ್ಲೇಶ್, ಮಂಜುನಾಥ, ಸಯಿದಾ ಬೇಗಂ, ರೇಖಾ, ಲತಾರಾಣಿಶ ಮತ್ತು ತಾಲೂಕಿನ ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now