Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉಸ್ತುವಾರಿಯಾದ ಬೆನ್ನಲ್ಲೇ ಗದಗಕ್ಕೆ ಮೊದಲ ಭೇಟಿ : ಆದ್ರೆ ಬಿ ಸಿ ಪಾಟೀಲ್ ಗೆ ಅಲ್ಲಿ ಆದದ್ದು ಏನು..?

Facebook
Twitter
Telegram
WhatsApp

 

ಗದಗ: ಸಿಎಂ ಬಸವರಾಜ್ ಬೊಮ್ಮಾಯಿ ಎಲ್ಲಾ ಜಿಲ್ಲೆಗೂ ಉಸ್ತುವಾರಿಗಳನ್ನ ನೇಮಕ ಮಾಡಿದೆ. ಆದ್ರೆ ಈ ಬಾರಿ ಎಲ್ಲರನ್ನು ಅದಲು ಬದಲು ಮಾಡಿದ್ದಾರೆ. ಇದು ಕೆಲವು ಸಚಿವರಿಗೆ, ಬೆಂಬಲಿಗರಿಗೆ ಅಸಮಾಧಾನ ತಂದಿದೆ. ಗದಗ ಜಿಲ್ಲಾ ಉಸ್ತುವಾರಿಯನ್ನಾಗಿ ಸಚಿವ ಬಿ ಸಿ ಪಾಟೀಲ್ ಅವರನ್ನ ನೇಮಕ ಮಾಡಲಾಗಿದೆ.

ಉಸ್ತುವಾರಿಯಾಗಿ ನೇಮಕಗೊಂಡು ಮೊದಲ ಬಾರಿಗೆ ಸಚಿವ ಬಿ ಸಿ ಪಾಟೀಲ್ ಗದಗಕ್ಕೆ ಭೇಟಿ ನೀಡಿದ್ದರು. ಆದ್ರೆ ಅಲ್ಲಿನ ವಾತಾವರಣ ನೋಡಿದಾಗ ಇನ್ನು ಆ ಅಸಮಾಧಾನದ ಕಿಡಿ ಹೊಗೆಯಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಯಾಕಂದ್ರೆ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಬರ್ತಾರೆ ಅಂದ್ರೆ ಅಲ್ಲಿ ಶಾಸಕರು, ಬೆಂಬಲಿಗರು ಸೇರಿ ಅದ್ದೂರಿ ಸ್ವಾಗತ ಮಾಡ್ತಾರೆ. ಆದ್ರೆ ಬಿ ಸಿ ಪಾಟೀಲ್ ಹೋದಾಗ ಸ್ವತಃ ಪಕ್ಷದವರೇ ಅವರನ್ನ ಸ್ವಾಗತ ಮಾಡಲು ಬಂದಿರಲಿಲ್ಲ. ಅದೆಲ್ಲವನ್ನು ಗಮನ ಹರಿಸದೇ ಬಿ ಸಿ ಪಾಟೀಲ್ ಡಿಸಿ ಕಚೇರಿ ಎದುರು ನಿರ್ಮಾಣವಾಗ್ತಿರುವ ಬಿಜೆಪಿ ಕಟ್ಟಡ ವೀಕ್ಷಣೆ ಮಾಡಿ, ಬಳಿಕ ಪುಟ್ಟರಾಜ ಗವಾಯಿಗಳ ಆಸ್ರಮಕ್ಕೆ ಹೋಗಿದ್ದರು. ನಂತರ ಜಿಲ್ಲೆಯ ಪ್ರಗತಿಪರ ಸಭೆ ನಡೆಸಿದ್ದಾರೆ.

ಈ ಮೂಲಕ ಇನ್ನು ಉಸ್ತುವಾರಿ ಸಚಿವರ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿರುವುದು ಕಂಡು ಬಂದಿದೆ. ಹಾಗೇ ಗದಗಕ್ಕೆ ಶ್ರೀರಾಮುಲು ಅವರನ್ನ ನೇಮಕ ಮಾಡಿ ಅಥವಾ ಸಿಸಿ ಪಾಟೀಲ್ ಅವರನ್ನ ಮುಂದುವರೆಸಿ ಅಂತ ಪಟ್ಟು ಹಿಡಿದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಕೇಸ್: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ದಾಗ ಮಾಡಿಕೊಂಡ ವಿಡಿಯೋ.. ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು : ಮೋದಿ ಒತ್ತಾಯ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರನ್ನು ಕರೆಸಿ, ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಧಾನಿ

ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ : ಬೇಗ ಬೇಗ ವೋಟ್ ಮಾಡಿ ಬಿಡಿ

ಬೆಂಗಳೂರು: ನಿನ್ನೆಯಿಂದ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಇಂದು ಕೂಡ ಹವಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ ಮತ್ತು ರಾಮನಗರದ

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

error: Content is protected !!