ಬೆಂಗಳೂರು: ಅನರ್ಹ ಬಿಪಿಎಲ್ ಫಲಾನುಭವಿಗಳ ವಿರುದ್ಧ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈಗಾಗಲೇ ಆಪರೇಷನ್ ಕಾರ್ಯಾಚರಣೆ ಶುರುವಾಗಿದೆ. ಅನರ್ಹ ಬಿಪಿಎಲ್ ಕಾರ್ಡ್ ಯಾರೆಲ್ಲಾ ಹೊಂದಿದ್ದಾರೋ ಅವರ ವಿರುದ್ಧ ಇದೀಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದರ ಪರಿಣಾಮವಾಗಿ ಕಳೆದ 5 ತಿಂಗಳಲ್ಲಿ 15.12 ಲಕ್ಷ ಅನರ್ಹರಿಗೆ ಬಿಗ್ ಶಾಕ್ ಅನ್ನ ನೀಡಿದೆ.
ಸುಮಾರು 14.68 ಲಕ್ಷ ಮಂದಿ ಅನುಭವಿಸುತ್ತಿದ್ದ ಬಿಪಿಎಲ್ ಸವಲತ್ತನ್ನು ರದ್ದು ಮಾಡಿದೆ. 4.09 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡಗ ಎಪಿಎಲ್ ಕಾರ್ಡ್ ಆಗಿ ಬದಲಾವಣೆಯಾಗಿದೆ. ಇಲಾಖೆಯೂ 23,038 ಬಿಪಿಎಲ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ. 5,632 ಅನರ್ಹ ಬಿಪಿಎಲ್ ಕಾರ್ಡ್ ಗಳು ಶಾಶ್ವತವಾಗಿ ರದ್ದಾಗ್ತಾ ಇದೆ. ಈ ರೀತಿ ಅನರ್ಹ ಕಾರ್ಡ್ ಗಳನ್ನ ರದ್ದು ಮಾಡುವುದಕ್ಕೆ ಇಲಾಖೆಯಿಂದ ಸುಮಾರು 5 ತಿಂಗಳ ಕಾರ್ಯಾಚರಣೆಯನ್ನು ಮಾಡಲಾಗಿತ್ತು.
ಎಷ್ಟೋ ಜನ ಬಡವರಿಗೆ ಬೇಕಾದ ಅಕ್ಕಿ ಸಿಕ್ತಾ ಇರಲಿಲ್ಲ. ಉಳ್ಳವರ ಬಳಿಯೂ ಬಿಪಿಎಲ್ ಕಾರ್ಡ್ ಗಳು ಇದ್ದವು. ಈ ವಿಚಾರ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಹಾಗೇ ಇಡೀ ಕರ್ನಾಟಕದಲ್ಲಿ ಯಾರೆಲ್ಲ ಅನರ್ಹರು ಬಿಪಿಎಲ್ ಕಾರ್ಡ್ ಅನ್ನ ಹೊಂದಿದ್ದಾರೆ ಎಂಬುದನ್ನು ಗುರುತಿಸುವುದು ಸುಲಭವಾಗಿರಲಿಲ್ಲ. ಅದರ ಹಿಂದೆ ಇಲಾಖೆ ಸಾಕಷ್ಟು ಶ್ರಮ ಹಾಕಿದೆ. ಅಂತಿಮವಾಗಿ ಈಗ ಅನರ್ಹರನ್ನು ಪತ್ತೆ ಹಚ್ಚಿದ್ದು, ರಾಜ್ಯದಲ್ಲಿ ಹಲವು ಕಾರ್ಡ್ ಗಳನ್ನ ರದ್ದು ಮಾಡಿದೆ. ಬಿಪಿಎಲ್ ಇದ್ದ ಕಾರ್ಡ್ ಗಳನ್ನ ಎಪಿಎಲ್ ಆಗಿ ಕನ್ವರ್ಟ್ ಮಾಡಿದೆ. ಈ ಮೂಲಕ ನಿಜವಾಗಿಯೂ ಅಗತ್ಯ ಇರುವವವರಿಗೆ ಇನ್ಮುಂದೆ ಆಹಾರ ಸಿಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














