ರಾಯ್ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡ್ರು ಸಿಬ್ಬಂದಿಗ್ಯಾಕೆ ತಿಳಿಲಿಲ್ಲ..?

1 Min Read

 

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ತಮ್ಮ ಬಂದೂಕಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆದರೂ 20 ನಿಮಿಷದ ಮೇಲೆ ವಿಷಯ ಬೆಳಕಿಗೆ ಬಂದಿದೆ. ಸಿಬ್ಬಂದಿಗಳು ಕಚೇರಿಯಲ್ಲಿದ್ರು, ಐಟಿ ಅಧಿಕಾರಿಗಳು ಕಚೇರಿಯಲ್ಲಿಯೇ ಇದ್ದರು ಕೂಡ ಯಾರಿಗೂ ಪಿಸ್ತೂಲ್ ಶಬ್ಧ ಕೇಳಿಸಲೇ ಇಲ್ವಾ ಎಂಬ ಪ್ರಶ್ನೆ ಎಲ್ಲರನ್ನು ಸಹಜವಾಗಿಯೇ ಕಾಡುತ್ತಾ ಇತ್ತು. ಇದೀಗ ಅದಕ್ಕೆಲ್ಲ ಉತ್ತರವೂ ಸಿಕ್ಕಿದೆ.

ಪಿಸ್ತೂಲ್ ನಿಂದ ಬುಲೆಟ್ ಹೊರಗೆ ಬಂದಾಗ ಸಹಜವಾಗಿಯೇ ಶಬ್ಧ ಕೇಳಿಸಿದೆ. ಆದರೆ ಆ ಶಬ್ದ ರೂಮಿನಿಂದ ಹೊರಗೆ ಬರದೆ ಇರಲು ಕಾರಣವೂ ಒಂದಿದೆ. ರಾಯ್ ಚೇಂಬರ್ ಸೌಂಡ್ ಪ್ರೂಫ್ ಆಗಿದೆಯಂತೆ. ರಾಯ್ ಕೂರುತ್ತಿದ್ದ ಕೊಠಡಿಯಲ್ಲಿ ಯಾರೇ ಮಾತನ್ನಾಡಿದರೂ ಆ ಶಬ್ಧ ಹೊರಗೆ ಬರುತ್ತಿರಲಿಲ್ಲವಂತೆ. ಧ್ವನಿ ಹೊರಗೆ ಹೋಗದಂತೆ ಇಂಟಿರಿಯರ್ ಮಾಡಿಸಿದ್ದರಂತೆ. ಹೀಗಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡರು ಶಬ್ಧ ಹೊರಗೆ ಹೋಗಿಲ್ಲ. ಯಾರಿಗೂ ತಿಳಿದಿಲ್ಲ. ಜೊತೆಗೆ ಅವರು ಕೊಠಡಿಯ ಒಳಗೆ ಹೋಗಿ 20 ನಿಮಿಷವಾದರೂ ಬಾರದೆ ಇದ್ದ ಕಾರಣಕ್ಕೆ ಹೊರಗಿನಿಂದ ಎಲ್ಲರು ಕೂಗಿದ್ದಾರೆ.

ಯಾರೂ ಎಷ್ಟೇ ಕೂಗಿದರು ಒಳಗಡೆಯಿಂದ ಧ್ವನಿ ಬಾರದ ಹಿನ್ನಲೆ ಮನೆಯವರ ಅನುಮತಿ ಪಡೆದು, ಬಳಿಕ ಭದ್ರತಾ ಸಿಬ್ಬಂದಿಯ ಸಹಾಯದಿಂದ ಬಾಗಿಲನ್ನು ಹೊಡೆದಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ. ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯುಸಿರೆಳೆದಿದ್ದಾರೆ. ಸದ್ಯ ಅವರ ಸಾವಿಗೆ ಸ್ಪಷ್ಟ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ. ಎಸ್ಐಟಿ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.

Share This Article
Enable Notifications OK No thanks