ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಗಿಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ, ಜನರ ಬೆಂಬಲವೂ ಇದೆ. ಇದರ ನಡುವೆ ಅಶ್ವಿನಿ ಗೌಡ ಅವರ ಹೆಸರು ಕೂಡ ಓಡಾಡ್ತಾ ಇದೆ. ಅಶ್ವಿನಿ ಗೌಡ ಅವರನ್ನೆ ಗೆಲ್ಲಿಸೋದು ಎಂಬ ವಿಚಾರ ಓಡಾಡ್ತಾ ಇದೆ. ಇದರ ನಡುವೆ ಕರವೇ ಅಧ್ಯಕ್ಷ ನಾರಾಯಣ ಗೌಡ್ರು ಹಾಗೂ ಸುದೀಪ್ ಭೇಟಿ ಮಾಡಿದ ಫೋಟೋಗಳು ವೈರಲ್ ಆಗ್ತಾ ಇದೆ. ಅಶ್ವಿನಿ ಗೌಡ ಗೆಲ್ಲಿಸಲು ಡೀಲ್ ನಡೀತಾ ಇದೆ ಎಂಬೆಲ್ಲಾ ಚರ್ಚೆಗಳು ನಡೆಯುತ್ತಾ ಇದೆ. ಈ ಸಂಬಂಧ ನಾರಾಯಣ ಗೌಡ್ರು ಯಾಕ್ ಹೋಗಿದ್ದರು ಎಂಬ ಬಗ್ಗೆ ಕರವೇ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.
ಕರವೇ ಅಧ್ಯಕ್ಷರಾದ ನಾರಾಯಣ ಗೌಡ್ರು ತಮ್ಮ ಮಗನ ಮದುವೆ ಕಾರ್ಡ್ ಕೊಡುವುದಕ್ಕೆಂದು ಸುದೀಪ್ ಅವರ ಮನೆಗೆ ಹೋಗಿದ್ದರು. ಆದರೆ ಗಿಲ್ಲಿ ಫ್ಯಾನ್ಸ್ ಈ ರೀತಿ ತಿರುಗಿಸಿದ್ದಾರೆ. ಇರಲಿ ನಾವೂ ಇದಕ್ಕೆಲ್ಲಾ ಜಗ್ಗಲ್ಲ. ಕರವೇ ಕಾರ್ಯಕರ್ತರೆಲ್ಲಾ ಅಶ್ವಿನಿ ಗೌಡ ಅವರಿಗೆ ವೋಟ್ ಮಾಡುತ್ತೇವೆ. ಅಶ್ವಿನಿ ಗೌಡ ಅವರೇ ಬಿಗ್ ಬಾಸ್ ಟ್ರೋಫಿಯನ್ನ ಗೆಲ್ಲೋದು ಎಂದಿದ್ದಾರೆ.
ನಾರಾಯಣ ಗೌಡ್ರು ಹಾಗೂ ಸುದೀಪ್ ಅವರು ಕೂತಿರುವ ಫೋಟೋ ವೈರಲ್ ಆಗಿದೆ. ಆ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದಾಗ ಸುದೀಪ್ ಅವರ ಕೈಲಿ ಪತ್ರಿಕೆ ಒಂದು ಇದೆ. ಅದು ಮದುವೆಯ ಆಮಂತ್ರಣ ಪತ್ರಿಕೆಯೇ ಆಗಿದೆ. ಅದು ನಾರಾಯಣ ಗೌಡ್ರ ಮಗನ ವಿವಾಹ ಪತ್ರಿಕೆಯಾಗಿದೆ. ಇನ್ನು ಕೆಲವೇ ದಿನಗಳು ಫಿನಾಲೆಗೆ ಬಾಕಿ ಇರುವಾಗ ಈ ರೀತಿ ಸುಳ್ಳು ಸುದ್ದಿ ಹಬ್ಬಿದ್ದು ಮಾತ್ರ ವಿಪರ್ಯಾಸ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











