ಬಳ್ಳಾರಿ: ಬ್ಯಾನರ್ ಗಲಾಟೆ ಬಳ್ಳಾರಿಯಲ್ಲಿ ಇನ್ನು ಕೂಡ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೀಗಾಗಿಯೇ ಪೊಲೀಸರ ಬುಗಿ ಭದ್ರತೆ ಮುಂದುವರೆದಿದೆ. ಸೂಕ್ಷ್ಮ ಜಾಗದಲ್ಲಿ ಪೊಲೀಸರ ಭದ್ರತೆಯನ್ನು ಹೆಚ್ಚಿಸಿದೆ. ಇಜ ಗಲಾಟೆ, ಸಾವು ನಡೆಯದೆ ಹೋಗಿದ್ದರೆ ಇಂದು ಬಳ್ಳಾರಿ, ವಾಲ್ಮೀಕಿ ಕಾರ್ಯಕ್ರಮದಿಂದ ಕಂಗೊಳಿಸ್ತಾ ಇರ್ತಾ ಇತ್ತು. ವಾಲ್ಮೀಕಿ ಪ್ರತಿಮೆ ಅನಾವರಣಗೊಳ್ಳುತ್ತಿತ್ತು. ಗಲಭೆಯಾದ ಹಿನ್ನೆಲೆ ವಾಲ್ಮೀಕಿ ವೃತ್ತದ ಸುತ್ತಲು ಪೊಲೀಸರಿಂದ ಬಿಗಿ ಭದ್ರತೆಯನ್ನ ಒದಗಿಸಲಾಗಿದೆ.
ವಾಲ್ಮೀಕಿ ವೃತ್ತದಲ್ಲಿ ಕಾರ್ಯಕ್ರಮಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನ ನಡೆಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜಕಾರಣಿಗಳು, ಪ್ರಮುಖರು ವಾಲ್ಮೀಕಿ ವೃತ್ತದಲ್ಲಿ ಸೇರ್ತಾ ಇದ್ರು. ಇದೀಗ ಕಾರ್ಯಕ್ರಮ ಮುಂದೂಡಿಕೆಯಾಗಿರುವ ಕಾರಣ ಬ್ಯಾನರ್, ಲೈಟ್ಸ್, ಬಾವುಟಗಳನ್ನು ತೆರವು ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜನೆ ಮಾಡಿದ್ದಾರೆ.
ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ನಡೆದ ಗಲಾಟೆಯಿಂದಾಗಿಯೇ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದರು. ಹೀಗಾಗಿಯೇ ಮತ್ತೆ ಯಾವುದೇ ಸಣ್ಣ ಅವಘಡವೂ ಸಂಭವಿಸಬಾರದು ಎಂಬ ಕಾರಣಕ್ಕೆ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಬಳ್ಳಾರಿಯಲ್ಲಿ ಎಲ್ಲಿ ನೋಡಿದರು ಪೊಲೀಸರು ಕಾಣಿಸುತ್ತಾ ಇದ್ದಾರೆ. ಯಾಕಂದ್ರೆ ಗಲಾಟೆಯಲ್ಲಿ ಒಬ್ಬ ಇದಾಗಲೇ ಸತ್ತಿದ್ದಾನೆ. ದ್ವೇಷ, ಕೋಪ ಎಂಬುದು ಬೇರೆ ಯಾವ ಅವಘಡಕ್ಕೂ ಕಾರಣವಾಗಬಾರದು ಎಂಬ ಮುಂದಾಲೋಚನೆಯನ್ನ ಪೊಲೀಸರು ವಹಿಸಿದ್ದಾರೆ. ರಾಜಶೇಖರ್ ರೆಡ್ಡಿ ಕುಟುಂಬಸ್ಥರು ಮಗನ ಕಳೆದುಕೊಂಡ ದುಃಖದಲ್ಲಿದ್ದಾರೆ. ಅವರ ಮರಣೋತ್ತರ ಪರೀಕ್ಷೆ ವೇಳೆ ದೇಹಕ್ಕೆ ಹೊಕ್ಕಿದ್ದ ಗುಂಡನ್ನು ಹೊರ ತೆಗೆಯಲಾಗಿದೆ. ಈಗಾಗಲೇ ಅಂತ್ಯ ಸಂಸ್ಕಾರವೂ ಮುಗಿದಿದ್ದು, ಮಗನನ್ನು ಕಳೆದುಕೊಂಡ ತಾಯಿ ಅತ್ತು ಅತ್ತು ಮೌನವಾಗಿದ್ದಾರೆ. ರಾಜಶೇಖರ್ ಮನೆಯಲ್ಲಿ ನೀರವ ಮೌನ ಆವರಿಸಿದೆ.


