Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

21 ದಿನದಲ್ಲಿ ಮಂತ್ರಾಲಯದಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ಕಾಣಿಕೆ..?

---Advertisement---

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಭಕ್ತರ ಸಂಖ್ಯೆ ಏನು ಕಡಿಮೆ ಇಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಭಕ್ತರಿದ್ದಾರೆ. ಅಷ್ಟೇ ಯಾಕೆ ಬೇರೆ ರಾಜ್ಯದವರಿಗೂ ರಾಯರೆಂದರೆ ಅಪಾರವಾದ ಭಕ್ತಿ. ಹೀಗಾಗಿಯೇ ಮಂತ್ರಾಲಯದ ಮಠ ಸದಾ ಕಾಲ ಗಿಜಿಗುಡುತ್ತಾ ಇರುತ್ತದೆ. ಇಂದು ಮಠದ ಕಾಣಿಕೆ ಹುಂಡಿಯನ್ನ ಒಡೆಯಲಾಗಿದೆ. ಭಕ್ತರು ತಮ್ಮ ಭಕ್ತಿಯಿಂದ ಹಾಕಿದ ಕಾಣಿಕೆಯನ್ನ ಎಣಿಕೆ ಮಾಡಲಾಗಿದೆ.

ಈ ಮೂಲಕ 21 ದಿನದಲ್ಲಿ 3.06 ಕೋಟಿ ಹಣ ಸಂಗ್ರಹವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನ 21 ದಿನದ ಹುಂಎಇ ಎಣಿಕೆಯಲ್ಲಿ 3,6,81,661 ರೂಪಾಯಿ ಸಂಗ್ರಹವಾಗಿದೆ. ಕೇವಲ ಎರಡೇ ತಿಂಗಳಲ್ಲಿ ರಾಯರಿಗೆ ಕೋಟ್ಯಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 2,97,44,661 ರೂಪಾಯಿ ನೋಟಿನ ರೂಪದಲ್ಲಿ ಬಂದಿದ್ದರೆ, 9,37,000 ರೂಪಾಯಿ ನಾಣ್ಯದ ರೂಪದಲ್ಲಿ ಬಂದಿದೆ. 23 ಗ್ರಾಂ ಚಿನ್ನ, 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು.

ಬೇಡಿದ್ದನ್ನು ಕರುಣಿಸುವ ಕರುಣಾಮಯಿ ಶ್ರೀ ರಾಘವೇಂದ್ರ ಸ್ವಾಮಿಗಳು. ಮಠಕ್ಕೆ ಆಗಾಗ ಭೇಟು ನೀಡಿ, ರಾಯರ ಬೃಂದಾವನ ದರ್ಶನ ಮಾಡಿ ಪಾವನವಾದೆವು ಎಂಬ ಭಕ್ತಿ ಜನರದ್ದು. ಅದೆಷ್ಟೋ ಜನರಿಗೆ ನೆಮ್ಮದಿಯ ತಾಣ ಕೂಡ. ಸಂಕಷ್ಟಗಳನ್ನು ಬಗೆಹರಿಸಿದಾಗ ತಮ್ಮಿಂದಾದ ಕಾಣಿಕೆಯನ್ನು ದೇವರಿಗೆ ನೀಡುತ್ತಾರಡ‌ ಅದರ ಎಣಿಕೆಯೇ ಇಂದು ನಡೆದಿದೆ. ಸದ್ಯ ರಾಜ್ಯದ ಶ್ರೀಮಂತ ದೇವರುಗಳಲ್ಲಿ ರಾಯರು ಕೂಡ ಇದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now