ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಅನುಭವಿಸುತ್ತಿರುವ ಕೈದಿಗಳ ವಿಡಿಯೋ ಹೊರ ಬಂದಿತ್ತು. ಅದರಲ್ಲೂ ಎಂಥಾ ಕೈದಿಗಳು ಉಗ್ರಗಾಮಿಗೆ ರಾಜಾತಿಥ್ಯವಿದ್ದದ್ದು. ಈ ಸಂಬಂಧ ತನಿಖೆ ಕೂಡ ಶುರುವಾಗಿದೆ. ದರ್ಶನ್ ಜೈಲಿನಲ್ಲಿಯೇ ಇದ್ದರು, ಕೇವಲ ಹಾಸಿಗೆ, ದಿಂಬಿಗಾಗಿ ಕೋರ್ಟ್ ನಲ್ಲಿ ಮನವಿ ಮಾಡಿದ್ರು ಸಿಕ್ತಿಲ್ಲ. ಆದರೆ ಹೀಗೆ ಉಗ್ರಗಾಮಿಗಳಿಗೆ ನೀಡುತ್ತಿರೋದು ಎಷ್ಟು ಸರಿ ಎಂಬ ಚರ್ಚೆಗಳು ಆಗಿತ್ತು. ಬಳಿಕ ಅದರ ತನಿಖೆ ಶುರುವಾಗಿದ್ದು, ಆರಂಭದಲ್ಲಿ ದರ್ಶನ್ ಅವರ ಆಪ್ತ ಧನ್ವೀರ್ ಅವರಿಗೆ ನೋಟೀಸ್ ನೀಡಿ, ವಿಚಾರಣೆ ನಡೆಸಿದ್ದರು. ಇದೀಗ ವಿಜಯಲಕ್ಷ್ಮೀ ಅವರ ಹೆಸರು ಈ ಕೇಸಲ್ಲಿ ತಗಲಾಕಿಕೊಂಡಿದೆ.
ಧನ್ವೀರ್ ಅವರಿಗೆ ಎರಡನೇ ಬಾರಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆ ವೇಳೆ ವಿಜಯಲಕ್ಷ್ಮೀ ಅವರ ಹೆಸರು ಬಂದಿದೆ ಎನ್ನಲಾಗಿದೆ. ಹಾಗೇ ವಿಚಾರಣೆ ವೇಳೆ ವಿಡಿಯೋ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ನನಗೆ ಲಾಯರ್ ಕಡೆಯಿಂದ ವಿಡಿಯೋ ಬಂದಿದ್ದು. ಅದನ್ನ ವಿಜಯಲಕ್ಷ್ಮಿ ಅವರಿಗೆ ಕಳುಹಿಸಿದೆ. ಮಾಧ್ಯಮದವರಿಗೆ ಅದು ಹೇಗೆ ರೀಚ್ ಆಯ್ತು ಅನ್ನೋದು ನನಗೆ ಗೊತ್ತಿಲ್ಲ ಎಂಬ ವಿಚಾರವನ್ನ ಹೇಳಿದ್ದಾರೆ ಎನ್ನಲಾಗಿದೆ.

ವಿಜಯಲಕ್ಷ್ಮಿ ಅವರ ಹೆಸರು ಬಂದ ಮೇಲೆ ಅಧಿಕಾರಿಗಳು ಅವರನ್ನು ಕರೆಸಿ ತನಿಖೆ ನಡೆಸುವ ಸಾಧ್ಯತೆ ಇದೆ. ವಿಡಿಯೋ ಲೀಕ್ ಆಗಿದ್ದು ಹೇಗೆ ಎಂಬ ಬಗ್ಗೆ ಸದ್ಯಕ್ಕೆ ತನಿಖೆ ನಡೆಯುತ್ತಿದೆ. ವಿಜಯಲಕ್ಷ್ಮಿ ಅವರು ಪೊಲೀಸರ ಮುಂದೆ ಏನು ಹೇಳ್ತಾರೆ ಎಂಬುದನ್ನ ನೋಡಬೇಕಿದೆ. ಇದೆಲ್ಲ ಬೆಳವಣಿಗೆಯ ನಡುವೆ ದರ್ಶನ್ ಅವರು ಹಾಸಿಗೆ, ದಿಂಬು ಸಿಗದೆ ಜೈಲಲ್ಲಿ ಸಿಕ್ಕ ಸೌಲಭ್ಯಗಳಲ್ಲಿಯೇ ಬದುಕುತ್ತಿದ್ದಾರೆ.










