ಬೆಂಗಳೂರು: ಸರ್ಕಾರಿ ಶಾಲೆಗಳ ಪರಿಸ್ಥಿತಿ ಈಗ ಯಾವ ಹಂತಕ್ಕೆ ತಲುಪಿದೆ ಎಂಬುದನ್ನ ಬಿಡಿಸಿ ಹೇಳುವ ಅಗತ್ಯವಿಲ್ಲ. ಹಳ್ಳಿ ಹಳ್ಳಿಗೂ ಇದ್ದಂತ ಸರ್ಕಾರಿ ಶಾಲೆಗಳು ಈಗ ಹುಡುಕಿದರೂ ಅಲ್ಲೊಂದು ಇಲ್ಲೊಂದು ಎಂಬಂತಾಗಿದೆ. ಪ್ರಾರ್ಥನೆ ಮಾಡುವುದಕ್ಕೆಂದು ನಿಂತರೆ ಇರುವೆ ಸಾಲಿನಂತೆ ಮಾರುದ್ಧ ಇರುತ್ತಿದ್ದ ಸಾಲುಗಳು ಈಗ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾರಣ ಖಾಸಗಿ ಶಾಲೆಗಳ ಹೆಚ್ವುವಿಕೆ. ಇಂಥ ಪರಿಸ್ಥಿತಿಯಲ್ಲೂ ಹಾಗೋ ಹೀಗೋ ಅಲ್ಲೊಂದು ಇಲ್ಲೊಂದು ಅಂತ ಸರ್ಕಾರಿ ಶಾಲೆಗಳನ್ನ ಉಳಿಸಿಕೊಳ್ಳಲಾಗಿದೆ. ಈಗ ನೋಡಿದ್ರೆ ಕೆಪಿಎಸ್ ಯೋಜನೆ ತಂದು ಇನ್ನಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಹೋಗಿದೆ.
ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ. ಬಳಿಕ ಆ ವಿದ್ಯರ್ಥಿಗಳನ್ನು ಅಲ್ಲೆ ಹತ್ತಿರದ ಪಬ್ಲಿಕ್ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಇದರಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 25 ಶಾಲೆಗಳಿಗೆ ಬೀಗ ಹಾಕಲು ನಿರ್ಧಾತ ಮಾಡಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ವಿಲೀನದ ಹೆಸರಿನಲ್ಲಿ ಸರ್ಕಾರದ ಈ ನಿರ್ಧಾರಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಇರೋದು 46 ಸಾವಿರ ಸರ್ಕಾರಿ ಶಾಲೆಗಳು. ಆದರೆ 309 KPS ಶಾಲೆಗಳು ಇದ್ದಾವೆ. ಸರ್ಕಾರಿ ಶಾಲೆಯಲ್ಲಿರುವ ಮಕ್ಕಳು ಕೆಪಿಎಸ್ ಶಾಲೆಗೆ ಹೋಗುವುದಕ್ಕೆ ಸರ್ಕಾರವೇ ಬಸ್ ವ್ಯವಸ್ಥೆ ಕೂಡ ಮಾಡುತ್ತಿದೆ. 80 ಮಕ್ಕಳಿರುವ ಶಾಲೆಗಳನ್ನ ಮುಚ್ಚುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಇದರಿಂದ ಬಡಮಕ್ಕಳ ಶಿಕ್ಷಣ ಮತ್ತಷ್ಟು ಕುಂಠಿತವಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಿರುವ ಸರ್ಕಾರಿ ಶಾಲೆಗಳನ್ನೆ ನಂಬಿಕೊಂಡು ಅದೆಷ್ಟೋ ಮಕ್ಕಳು ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಮಕ್ಕಳ ಭವಿಷ್ಯ ಏರುಪೇರಾಗುತ್ತಾ ಎಂಬ ಆತಂಕವೂ ಇದೆ.










