Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಸೆಂಬರ್ 6 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನ | ಭೀಮ ಜ್ಞಾನ ಜ್ಯೋತಿ ನಮನ ಕಾರ್ಯಕ್ರಮ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 04 :  ಭೀಮಯಾತ್ರೆ ಬಳಗದವತಿಯಿಂದ ಭಾರತರತ್ನ  ಡಾ.ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರ ಸಂಜೆ 6 ಗಂಟಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಭೀಮ ಜ್ಞಾನ ಜ್ಯೋತಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಭೀಮ ಯಾತ್ರೆ ಬಳಗ ತಿಳಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನ್ಯಾಯವಾದಿಗಳು ಬಳಗದ ಮುಖಂಡರಾದ ಈ.ಎಸ್.ರವೀಂದ್ರ ರವರು ಸಂವಿಧಾನದ ಅರಿವಿಗಾಗಿ ಮಾನವೀಯತೆಯ ಉಳಿವಿಗಾಗಿ ಬುದ್ದ ಬಸವ ಅಂಬೇಡ್ಕರ್ ತತ್ವದಡಿಯಲ್ಲಿ ಭೀಮಯಾತ್ರೆ ನಡೆಯುತ್ತಿದ್ದು, ಡಿ.6ರ ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದ್ದು, ನಮ್ಮೆಲ್ಲರ ಬದುಕು, ಉಸಿರು, ಜೀವನವನ್ನು ನೀಡಿರುವ ಮಹಾನಾಯಕ ಅಂಬೇಡ್ಕರ್ ರವರಿಗೆ ನಮನ ಸಲ್ಲಿಸುವುದು ಅದ್ಯ ಕರ್ತವ್ಯವಾಗಿದೆ.

ಪ್ರಪಂಚದ 197 ದೇಶಗಳು ಸಹಾ ಅಂಬೇಡ್ಕರ್ ರವರಿಗೆ ಈ ದಿನದಂದು ನಮನ ಸಲ್ಲಿಸುತ್ತಿದ್ದಾರೆ. ಅದರಂತೆ ಈ ಮಹಾನ್ ವ್ಯಕ್ತಿಯನ್ನು ಸ್ಮರಣೆ ಮಾಡುವುದು ಸಹಾ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
600 ಸಾಮಂತ ಪ್ರಾಂತ್ಯಗಳನ್ನು ವಿವಿಧ ಪ್ರದೇಶಗಳನ್ನು ವಿವಿಧ ಧರ್ಮಗಳನ್ನು ನೂರಾರು ಭಾಷೆಗಳನ್ನು ಒಟ್ಟುಗೂಡಿಸಿ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಭವ್ಯ ಭಾರತವನ್ನು ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ರೂಪಿಸಿ ಸಂವಿಧಾನವನ್ನು ರಚಿಸಿದ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವೂ ಅವಿಸ್ಮರಣೀಯವಾಗಿದೆ ಎಂದ ಅವರು, ಇದರ ಅಂಗವಾಗಿ ಡಿ.6 ರ ಸಂಜೆ 6 ಗಂಟೆಗೆ ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಭೀಮಾಯಾತ್ರೆ ಬಳಗವು ಭೀಮ ಜ್ಞಾನ ಜ್ಯೋತಿಯನ್ನು ಹಮ್ಮಿಕೊಂಡಿದೆ.

ಅಂದು ವಿಶ್ವಕ್ಕೆ ಸಾರಿ ಹೇಳಲು ಭೀಮಭೀಮಾನಿಗಳು, ಬಸವಾಭಿಮಾನಿಗಳು, ಬುದ್ದಾಭಿಮಾನಿಗಳು ತಮ್ಮ ಮನೆಯಿಂದ ಮಣ್ಣಿನ ಹಣತೆಯ ಭೀಮ ಜ್ಯೋತಿಯನ್ನು ತರುವುದರ ಮೂಲಕ ಭೀಮ ಪ್ರತಿಮೆಗೆ ಬೆಳಗುವುದು ಮೂಲಕ ಪರಿನಿರ್ವಾಣ ದಿನವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕಿದೆ ಎಂದು ತಿಳಿಸಿದರು.
ಅಂದು ಸಂಜೆ ದೀಪಗಳೊಂದಿಗೆ ಅಂಬೇಡ್ಕರ್ ಪ್ರತಿಮೆಯಿಂದ ಸಾಗಿದ ಮೆರವಣಿಗೆಯೂ ಬಿ.ಡಿ.ರಸ್ತೆಯ ಮೂಲಕ ಸಂತೇಪೇಟೆಗೆ ಗಾಂಧಿ ವೃತ್ತವನ್ನು ದಾಟಿ ನಂತರ ಬಿ.ಡಿ.ರಸ್ತೆಯ ಮೂಲಕ ಮರಳಿ ಅಂಬೇಡ್ಕರ್ ಪ್ರತಿಮೆಯನ್ನಯ ತಲುಪಲಿದೆ ಎಂದು ರವೀಂದ್ರ ಹೇಳಿದರು.

ಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಶರಣಪ್ಪ, ಈ.ಎಸ್.ರವಿಕುಮಾರ್, ಮುಖಂಡರಾದ ಡಿ.ಕುಮಾರಸ್ವಾಮಿ, ಟಿ.ಸತೀಶ್, ಆರ್.ಪ್ರಕಾಶ್, ಎಸ್.ಮಂಜಣ್ಣ, ಜೆ.ಜೆ,ಹಟ್ಟಿ ರಘು, ಕೃಷ್ಣಮೂರ್ತಿ ಹೆಚ್.ನಟರಾಜ್ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!