ಈಸೂರು ಸ್ವಾತಂತ್ರ್ಯ ಚಳುವಳಿ ನೆನೆದ ಪ್ರಧಾನಿ ಮೋದಿ

suddionenews
1 Min Read

ಈಸೂರು ಸ್ವಾತಂತ್ರ್ಯ ಚಳುವಳಿ ನೆನೆದ ಪ್ರಧಾನಿ ಮೋದಿ

ಶಿವಮೊಗ್ಗ: ಇಂದು ಜಿಲ್ಲೆಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಇಲ್ಲಿನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬವಾಗಿರುವ ಕಾರಣ, ಅವರಿಗೆ ವಿಶೇಷವಾಗಿ ಶುಭಾಶಯಕೋರಿದ್ದಾರೆ.

ಇದೇ ವೇಳೆ ಜನರನ್ನುದ್ದೇಶಿಸಿ ಭಾಷಣ ಮಾಡಿ ಮೋದಿ, ಕರ್ನಾಟಕ, ಅಭಿವೃದ್ಧಿ ಪಥದ ಮೇಲೆ ನಡೆಯುತ್ತಿದೆ. ಈ ಅಭಿವೃದ್ಧಿ ಪಥ ರಾಜ್ಯಾದ್ಯಂತ ತಲುಪಲಿ. ಅಭಿವೃದ್ಧಿಯ ಪ್ರಗತಿಯ ಪಥದ ಮೇಲೆ ಓಡುತ್ತಿದೆ ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ಎರಡು ಕ್ಷೇತ್ರ ಉಲ್ಲೇಖಿಸಿದ ಪ್ರಧಾನಿ, ಗಂಗಾ ಸ್ನಾನ ತುಂಗಾ ಪಾನ ಎಂಬ ಉಕ್ತಿಯೇ ಇದೆ. ಉಸಿರು ಬಿಟ್ಟರೂ ಈಸೂರು ಬಿಡೆವು ಎಂದು ಹೋರಾಡಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.

ಶಿವಮೊಗ್ಗ ಪಶ್ಚಿಮಘಟ್ಟದಲ್ಲಿ ಬರುವ ಮಲೆನಾಡಿನ ಹೆಬ್ಬಾಗಿಲು ಇದ್ದಂತೆ. ಇಲ್ಲಿ ಜೋಗ್ ಜಲಪಾತ, ನದಿಗಳು, ಆನೆ ಬಿಡಾರವೂ ಇದೆ. ಇನ್ನು ಆಗುಂಬೆ ಸೂರ್ಯಾಸ್ತವನ್ನು ಮರೆಯಲು ಯಾರಿಂದಲಾದರೂ ಸಾಧ್ಯವೇ ಇಲ್ಲ. ಜಿಲ್ಲೆಯಲ್ಲಿ ನದಿ, ವನ್ಯ ಸಂಪತ್ತು ಅದ್ಭುತವಾಗಿದೆ ಎಂದು ಮಲೆನಾಡನ್ನು ಹಾಡಿ ಹೊಗಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *