ಚಿತ್ರದುರ್ಗ, ಮೇ 10 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಣ್ಣ ಇವತ್ತು ನಮ್ಮೊಡನೆ ಇಲ್ಲ ಆದರೆ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು ಅವರನ್ನು ನೆನಪಿಸುವಂತೆ ಮಾಡುತ್ತಿದೆ, ಚಿತ್ರದುರ್ಗ ಜಿಲ್ಲೆಗೆ ಸಾಕಷ್ಟು ಹೊಸ ಹೊಸ ಯೋಜನೆಗಳನ್ನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದಂತ ವ್ಯಕ್ತಿ ಇವತ್ತು ನಮ್ಮ ಬಳಿ ಇಲ್ಲ ಎನ್ನುವುದು ಮನಸ್ಸಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ಸುದಣ್ಣ ಹೇಗಿದ್ದೀಯಾ? ಚೆನ್ನಾಗಿದ್ದೀಯಾ? ಸ್ವಲ್ಪ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಡೆ ಸ್ವಲ್ಪ ಗಮನಹರಿಸಣ ಎನ್ನುತ್ತಲೆ ಫೋನ್ನಲ್ಲಿ ಸಂಭಾಷಣೆ ಮಾಡುತ್ತಿದ್ದೆ, ಸುದಣ್ಣ ಎನ್ನುತ್ತಲೆ ನಾನು ಅವರನ್ನು ಮಾತನಾಡಿಸುತ್ತಿದೆ, ಸಚಿವರಾಗಿದ್ದರು ಸಹ ಆತ್ಮೀಯವಾಗಿ ಪ್ರೀತಿಯ ತಮ್ಮನಂತೆ ನನ್ನನ್ನ ಅಪ್ಪಿಕೊಳ್ಳುತ್ತಿದ್ದರು ತಮಾಷೆಗಾಗಿ ಕೀಟಲೆ ಮಾಡುತ್ತಿದ್ದರು ಅಂತಹ ವ್ಯಕ್ತಿಯ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅಪಾರ ವೇದನೆ ಉಂಟುಮಾಡಿದೆ.
ಡಿ.ಸುಧಾಕರ್ ಅವರು 2008 ರಿಂದ ಹಿರಿಯೂರು ಶಾಸಕರಾಗಿದ್ದರು. ಎರಡನೇ ಬಾರಿಗೆ ಮಂತ್ರಿಯಾಗಿದ್ದ ಅವರು ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೆ. ಎರಡನೇ ಬಾರಿಗೆ ಶಾಸಕರಾದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕೊಡುಗೆ ನೀಡಿರುವ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದರು ಒಟ್ಟಿನಲ್ಲಿ ಡಿ.ಸುಧಾಕರ್ ಜನ ಮೆಚ್ಚಿದ ನಾಯಕನಾಗಿ ಜನ ಪ್ರೀತಿ ವಿಶ್ವಾಸನ ಪಡೆದಂತಹ ವ್ಯಕ್ತಿಯಾಗಿದರು.
ನನ್ನ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಅಣ್ಣನಂತೆ ಮಾರ್ಗದರ್ಶನ ನೀಡಿದವರು, ಆತ್ಮೀಯ ಸ್ನೇಹಿತರೂ ಆಗಿದ್ದ ಡಿ.ಸುಧಾಕರ್ ಅವರು ಸರಳತೆ, ಜನಪರ ಕಾಳಜಿ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು ಅವರು ಇವತ್ತು ನಮ್ಮ ಜೊತೆ ಇಲ್ಲದೆ ಇರುವುದು ಮನಸ್ಸಿಗೆ ಗಾಸಿಗೊಳಿಸಿದೆ.
ಡಿ.ಸುಧಾಕರ್ ರವರನ್ನ ಸಚಿವರಾಗಿದ್ದರು ಸಹ ನಾನು ಸುದಣ್ಣ ಅಂತಲೆ ಅವರನ್ನು ಕರೆಯುತ್ತಿದ್ದೆ, ಅವರ ಅಗಲಿಕೆ ನನ್ನ ವೈಯಕ್ತಿಕ ಜೀವನಕ್ಕೂ ಹಾಗೂ ರಾಜ್ಯ ರಾಜಕೀಯಕ್ಕೂ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












