ಬಾಯಿಗೆ ಬಂದ ಹಾಗೆ ಬೈತಾನೆ ಬೈರತಿ ಸುರೇಶ್ : ಕಟ್ಟಾ ಸುಬ್ರಮಣ್ಯ ನಾಯ್ಡು..!

suddionenews
1 Min Read

ಬೆಂಗಳೂರು: ಪುರಾವೇ ಇಲ್ಲದೇ ಯಾವುದೇ ಮಾತಾಡಿಲ್ಲ. ದಾಖಲೆ‌ ಕೊಟ್ಟು‌ ಮಾತಾಡುತ್ತೇನೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ. ನಾನು ಸುಮ್ನೆ ಇದ್ರೂ ನಂಗೆ ಬೈರತಿ ಸುರೇಶ್ ಬೈತಾನೆ. ನಾನೇನ ಮಾಡಿದೀನಿ ಸ್ವಾಮಿ, ಸುಮ್ನೆ ನಂಗೆ ಬಾಯಿಗೆ ಬಂದ ಹಾಗೆ ಬೈತಾನೆ ಬೈರತಿ ಸುರೇಶ್. ಎಲ್ಲರ ಮುಂದೆ ನಂಗೆ ಬೈತಾನೆ ಎಂದು ಬೇಸರ ಹೊರ ಹಾಕಿದ್ದಾರೆ.

ಹೆಬ್ಬಾಳ ಕ್ಷೇತ್ರದಲ್ಲಿ ಕಾಮಗಾರಿಗೆ ಕಮಿಷನ್ ತೆಗೆದು ಕೊಳ್ಳುತ್ತಿದ್ದಾರೆ. ಇಬ್ಬರು ಎಕ್ಸಿಕ್ಯುಟಿವ್ ಇಂಜಿನಿಯರ್, ಇಬ್ಬರು ಜ್ಯೂನಿಯರ್ ಇಂಜಿನಿಯರ್. ಎಂಟು ಜನ ಅಧಿಕಾರಿಗಳು ಕಮಿಷನ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಹಾಗೆಯೆ ದಾಖಲೆ‌ ಕೇಳಿದಕ್ಕೆ ಸರ್ ನಮ್ಮ ಕೆಲಸ ಹೊಗುತ್ತೆ ಅಂತ ರಿಕ್ವೆಸ್ಟ್ ಮಾಡಿದ್ದಾರೆ ಎಂದಿದ್ದಾರೆ.

ಕಟ್ಟಾ ಸುಬ್ರಮಣ್ಯ ನಾಯ್ಡುಗೆ 15 ಪ್ರೆಶ್ನೆ ಮುಂದಿಟ್ಟು ಶಾಸಕ ಬೈರತಿ ಸುರೇಶ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ, ತಮ್ಮ ವಿರುದ್ಧದ ಕೇಸುಗಳೆಲ್ಲಾ ಏನಾಗಿವೆ ಎಂದು ಕೇಸುಗಳ ಸಹಿತ ಪತ್ರಿಕಾ ಪ್ರಕಟಣೆ ಹೊರಡಿಸಿದ ಶಾಸಕ ಬೈರತಿ ಸುರೇಶ್. ಬೈರತಿ ಸುರೇಶ್ ಪ್ರಶ್ನೆ ಬಗ್ಗೆ ಕೇಳುತ್ತಿದ್ದಂತೆ ಕಟ್ಟಾ ಸುಬ್ರಮಣ್ಯ ನಾಯ್ಡು ಗರಂ ಆಗಿದ್ದಾರೆ. ಹೌದು ನಾನು ಬೇಲಲ್ಲಿ ಇದಿನಿ ಏನಿವಾಗ ಎಂದಿದ್ದಾರೆ. ನಾನು ಒಬ್ಬನೆ ಅಲ್ಲಾ ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಚಿದಂಬರಂ ಎಲ್ಲರು ಬೇಲ್ ಮೇಲೆ ಇದ್ದಾರೆ. ನನ್ನ ಎಷ್ಟು ಕೇಸಿಗೆ ಬೈರತಿ ಸುರೇಶ್ ಬೇಲ್ ಕೊಟ್ಟಿದ್ದಾರೆ ಅದನ್ನ ಅವರು ಮೊದಲು ಹೇಳಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *