ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26 : ನಗರದ ವೆಸ್ಟ್ರನ್ ಹಿಲ್ಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬಾದರದಿನ್ನಿ ಆರ್ಟ್ಸ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ರ ರಂಗ ಉಪನ್ಯಾಸ, ರಂಗಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ವೆಸ್ಟçನ್ ಹಿಲ್ಸ್ ಸಂಸ್ಥೆಯ ಆಡಳಿತಾಧಿಕಾರಿ ಶಿವಾರಾಧ್ಯ.ಟಿ ಉದ್ಧಾಟಿಸುವರು, ವೆಸ್ಟçನ್ ಹಿಲ್ಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಮಂಜುಳಾ.ಡಿ ಅವರು ಅಧ್ಯಕ್ಷತೆ ವಹಿಸುವರು. ನೀನಾಸಂ ಪಧವಿದರ ರಾಮುಭೋದೆ ಅವರು ರಂಗ ಉಪನ್ಯಾಸ ನೀಡುವರು. ಹಿನ್ನೆಲೆ ಗಾಯಕ ಮತ್ತು ರಂಗಭೂಮಿ ಕಲಾವಿದ ಡಾ.ಪ್ರಜ್ವಲ್ ಅವರು ರಂಗಗೀತೆಗಳನ್ನು ಪ್ರಸ್ತುತಪಡಿಸುವವರು. ಪಬ್ಲಿಕ್ ಟಿವಿ ಪ್ರತಿನಿಧಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಎಸ್.ಸಿದ್ಧರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿವರು.
ಬಾದರದಿನ್ನಿ ಆರ್ಟ್ಸ ಅಕಾಡೆಮಿ ಅಧ್ಯಕ್ಷರಾದ ಅನಸೂಯ ಬಾದರದಿನ್ನಿ ಉಪಸ್ಥಿತರಿರುವರು ಎಂದು ಬಾದರದಿನ್ನಿ ಆರ್ಟ್ಸ ಅಕಾಡೆಮಿ ಅಧ್ಯಕ್ಷ ಪ್ರಕಾಶ್ ಬಾದರದಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












