ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 : ಇದೇ ಫೆಬ್ರವರಿ 09 ರಂದು ಪರಶುರಾಮಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು 12 ಗಂಟೆಯೊಳಗೆ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾಮದ ಜಮೀನೊಂದರಲ್ಲಿ ಜೆಜೆ ಕಾಲನಿ ನಿವಾಸಿ ಜೆ.ಎಚ್.ಪ್ರಭಾಕರ್ (52) ಶವ ಕಂಡುಬಂದಿತ್ತು. ಕೊಲೆಶಂಕೆ ವ್ಯಕ್ತಪಡಿಸಿ ಪತ್ನಿ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು, ಕಲ್ಯಾಣದುರ್ಗ ತಾಲ್ಲೂಕಿನ ಕುಂದುರ್ಪಿ ಮಂಡಲದ ನಿವಾಸಿ ಆನಂದರೆಡ್ಡಿ ಮತ್ತು ಪಾವಗಡ ತಾಲ್ಲೂಕು ಕೋಟಗುಡ್ಡ ಗ್ರಾಮದ ರಾಮಕೃಷ್ಣ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಭೇದಿಸಿದ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ, ತಳಕು ಪಿಐ ಹನುಮಂತಪ್ಪ ಶಿವೀಹಳ್ಳಿ, ಪರಶುರಾಂಪುರ ಪಿಎಸ್ಐ ಎಚ್.ಮಾರುತಿ,, ಶಿವಕುಮಾರ್, ಎಚ್.ಸಿ. ಏಕಾಂತರೆಡ್ಡಿ, ವೀರೇಶ್, ಮಂಜುನಾಥ್, ನರೇಶಕುಮಾರ್, ಬಸವರೆಡ್ಡಿ, ಹನುಮಂತಪ್ಪ, ಶಿವಣ್ಣನಾಯ್ಕ, ಮಂಜುನಾಥ್, ನಾಗರಾಜ, ರಂಗಸ್ವಾಮಿ, ರಾಜೇಶ್, ಶಶಿಕುಮಾರ್, ರವಿ, ಹರಸೀಶ್, ನಿತೀನ್ಕುಮಾರ್, ಪುರುಷೋತ್ತಮ ಅವರ ಕಾರ್ಯಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












