ಬೆಂಗಳೂರು: ಇಂದು ಡಿಸಿಎಂ ನಾಳೆ ಸಿಎಂ ದೆಹಲಿಗೆ ಹೋಗ್ತಿರೋದು ಚರ್ಚೆ ಶುರುವಾಗಿದೆ. ಶಾಸಕರು, ಸಚಿವರನ್ನೆಲ್ಲಾ ದೆಹಲಿಗೆ ಕರೆದುಕೊಂಡು ಹೋಗ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ನನ್ನ ಜೊತೆಯಲ್ಲಿ ಅವರವರು ಅಲ್ಲ, ಕ್ಷೇತ್ರದವರ ಜೊತೆಗೆ ಅವರುಗಳು ಹೊರಡ್ತಾ ಇದ್ದಾರೆ. ವೊಇಟ್ ಚೋರಿ ಪ್ರೋಗ್ರಾಂ ಸಂಬಂಧ ಹೋಗುತ್ತಾ ಇದ್ದೀವಿ.
ನಮ್ಮ ರಾಜ್ಯದಿಂದ ವೋಟ್ ಚೋರಿ ಅಧ್ಯಯನ ಫ್ರೀಡಂ ಪಾರ್ಕ್ ನಿಂದ ಶುರುವಾಗುತ್ತೆ. ನಾಳೆ ರಾಮ್ ಲೀಲಾ ಮೈದಾನದಲ್ಲಿ ಆರಂಭವಾಗ್ತಾ ಇದೆ. ನಮ್ಮ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ದೆಹಲಿಗೆ ಹೋಗಿದ್ದಾರೆ. ಕೆಲವರು ಟ್ರೈನ್ ನಲ್ಲಿ, ಕೆಲವರು ವಿಮಾನದ ಮೂಲಕ, ರಾಜ್ಯದ ಎಲ್ಲಾ ಮೂಲೆ ಮೂಲೆಯಿಂದಾನೂ ನಮ್ಮ ಮುಖಂಡರು ಹೋಗಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಜನ ಶಾಸಕರಜ, ಪರಿಷತ್ ಸದಸ್ಯರು ಹೋಗಿದ್ದಾರೆ. ನಾನು ಕೂಡ ಹೋಗಬೇಕಾಗಿದೆ. ಅದಕ್ಕೆಲ್ಲ ವ್ಯವಸ್ಥೆ ಮಾಡಬೇಕು. ಅವರವರೇ ಮಾಡಿಕೊಂಡು ಹೋಗಿದ್ದಾರೆ.
ಅವರಿಗೆ ಶಕ್ತಿ ತುಂಬುತ್ತೇವೆ. ನಮಗೆ ಆತ್ಮವಿಶ್ವಾಸವಿದೆ. ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರಿಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನೇತೃತ್ವ ವಹಿಸಿದ್ದಾರೆ. ಹೀಗಾಗಿ ಅವರಿಗೆಲ್ಲಾ ನಾವೂ ಶಕ್ತಿ ತುಂಬ ಬೇಕಿದೆ. ಹಾಗಾಗಿ ಹೋಗುತ್ತೀವಿ. ಹೋಗಿ ತಲುಪುವುದೇ ತಡವಾಗುತ್ತದೆ. ಜೊತೆಗೆ ನಂಗೆ ನ್ಯಾಷನಲ್ ಹೆರಾಲ್ಡ್ ನೋಟೀಸ್ ಬಂದಿದೆಯಲ್ಲ. ಅದರ ಸಂಬಂಧ ಉತ್ತರ ಕೊಡಬೇಕಾಗುತ್ತದೆ. ಇವತ್ತು ಸ್ವಲ್ಪ ಬ್ಯುಸಿ ಇದ್ದೀನಿ. ಪೇಪರ್ಸ್ ಎಲ್ಲಾ ಕಲೆಕ್ಟ್ ಮಾಡಿಕೊ.ಮಡು ಅದಕ್ಕೆ ಉತ್ತರ ಕೊಟ್ಟು ಬರ್ತೀನಿ ಅಂತ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

