Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಯಾಕೆ ಕ್ರಮ ತಗೊಂಡ್ಲಿಲ್ಲ : ರಾಜಣ್ಣ ಪ್ರಶ್ನೆ

---Advertisement---

ಬೆಂಗಳೂರು: ದಾವಣಗೆರೆ ಉಪಚುನಾವಣೆ ಮುಗಿದ ಮೇಲಂತು ಕಾಂಗ್ರೆಸ್ ಸರ್ಕಾರದಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತಿವೆ. ಕೆಲವರ ತಲೆದಂಡ ಕೂಡ ಆಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿಯೇ. ಈ ಸಂಬಂಧ ಮಾಜಿ ಸಚಿವ ಕೆ.ಎನ್.ರಾಜಣ್ಣ ಬೇಸರದ ಮಾತುಗಳನ್ನ ಆಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ದಿವಂಗತರಾಗಿದ್ದಾರೆ. ಅವರ ಬಗ್ಗೆ ನಾವೂ ಯಾವುದೇ ರೀತಿಯ ಕಮೆಂಟ್ ಮಾಡಬಾರದು.

ಆದರೂ ಕೂಡ ಶಿವಮೊಗ್ಗ ಎಲೆಕ್ಷನ್ ಹೋಗಿ, ರಾಘವೇಂದ್ರ ಅವನಿಗೆ ಮತ ಹಾಕಿ ಅಂತ ಕೇಳಿದ್ರು. ಅವಾಗ ಯಾವುದೇ ಕ್ರಮ ಆಗ್ಲಿಲ್ಲ. ಅದು ಆಶಿಸ್ತು ಆಗಲ್ವಾ..? ಇವ್ರೆಲ್ಲಾ ಏನ್ ಮಾಡ್ತಿದ್ದರು ಆಗ. ಮೌಖಿಕವಾಗಿಯಾದರೂ ಒಂದು ಎಚ್ಚರಿಕೆ ಕೊಡಬಹುದಿತ್ತಲ್ಲ. ಕೊಟ್ಟಿದ್ದರಾ..? ಅವರ ಬಗ್ಗೆ ಆರೋಪ ಮಾಡ್ತಿಲ್ಲ. ಸಂಗತಿ ಹೇಳ್ತಾ ಇದ್ದೀನಿ ಅಷ್ಟೆ. ಅವರು ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡುವಂತದ್ದು. ಪಕ್ಷದಲ್ಲಿ ಶಾಸಕರಾಗಿದ್ದುಕೊಂಡು ಇನ್ನೊಂದು ಪಲ್ಷಕ್ಕೆ ವೋಟ್ ಹಾಕುವಂತೆ ಹೇಳ್ತಾ ಇರೋದು ಆಶಿಸ್ತು ಅಲ್ವಾ ಎಂದಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನ್ನಾಡಿದ ರಾಜಣ್ಣ ಅವರು, ಈ ರೀತಿ ಅಸಹಾಯಕ ಸ್ಥಿತಿಯನ್ನ ನಾವೂ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ಯಾಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಮುಂದೆ ಕಾಂಗ್ರೆಸ್ ಪಕ್ಷ ಬೆಳೀಬೇಕು, ಬಡವರಿಗೆ ಸಹಾಯ ಆಗಬೇಕು ಎನ್ನುವುದರ ಮೇಲೂ ಪಟ್ಟಭದ್ರರು ಹುನ್ನಾರಗಳನ್ನ ಮಾಡ್ತಾರೆ. ಆದರೆ ನಾವೂ ನಿರೀಕ್ಷೆ ಮಾಡೋದು ಇಂಥ ಸಂಗತಿಗಳು ಬಂದಾಗ ಸಿದ್ದರಾಮಯ್ಯ ಅವರು ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ತಾ ಇಲ್ಲ ಅನ್ನೋದೆ ಬೇಸರ. ಕಟ್ಟಾಕೋಕೆ ಅವರೇನು ಕುರಿನಾ..? ಕೋಣನಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...