Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊದಲ ಪಂದ್ಯದಲ್ಲೇ RCB ಸೋತಿದ್ದೇಕೆ : ನಾಯಕ ಹೇಳಿದ್ದೇನು..?

---Advertisement---

ಐಪಿಎಲ್ ಮ್ಯಾಚ್ ಗಳು ಈಗಾಗಲೇ ಶುರುವಾಗಿವೆ. ಅದರಲ್ಲೂ ಮೊದಲ ಮ್ಯಾಚ್ ಸಿ ಎಸ್ ಕೆ ಎದುರು ಆರ್ಸಿಬಿ ಅಬ್ಬರಿಸಿತ್ತು. ಆದರೆ ಮೊದಲ ಪಂದ್ಯವನ್ನು ಸಂಪ್ರದಾಯದಂತೆ ದೇವರಿಗೆ ಅರ್ಪಿಸಿದ್ದರು. ಮಹಿಳೆಯರು ಮ್ಯಾಚ್ ಗೆದ್ದು ಕಪ್ ತಮ್ಮದಾಗಿಸಿಕೊಂಡಿದ್ದರು. ಹೀಗಾಗಿ ಆರ್ಸಿಬಿ ಮ್ಯಾಚ್ ಸೋತಿದ್ದಕ್ಕೆ ಕನ್ನಡಿಗರು ಬೇಸರ ಮಾಡಿಕೊಂಡಿದ್ದರು. ಇದೀಗ ಆರ್ಸಿಬಿ ಮ್ಯಾಚ್ ಸೋತಿದ್ದಕ್ಕೆ ಕಾರಣವನ್ನು ನಾಯಕ ಫಾಫ್ ತಿಳಿಸಿದ್ದಾರೆ.

 

ನೀವು ಯಾವಾಗ ಚೆನ್ನೈ ಸ್ಟೇಡಿಯಮ್​ನಲ್ಲಿ ಕ್ರಿಕೆಟ್​ ಆಡಿದ್ರೂ 6 ಓವರ್​ಗಳ ಬಳಿಕ ಬ್ಯಾಟಿಂಗ್​ ಮಾಡುವುದು ಕಷ್ಟ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಒಳ್ಳೆಯ ಬೌಲರ್ಸ್​ ಇದ್ದಾರೆ. ಅವರು ಮಿಡಲ್​ ಆರ್ಡರ್​​ನಲ್ಲಿ ಚೆನ್ನಾಗಿ ಕಂಟ್ರೋಲ್​ ಮಾಡುತ್ತಾರೆ. ಮೊದಲು 10 ಓವರ್​ಗಳಲ್ಲಿ ಮಿಚ್​​ ಸರಿಯಾಗಿ ಇರಲಿಲ್ಲ. ಅವರು ಪ್ಲಾನ್​ ಮಾಡಿ ಚೇಸ್​ ಮಾಡಿದ್ರು. ನಾವು ಇನ್ನೊಂದಷ್ಟು ರನ್​ ಗಳಿಸಬೇಕಿತ್ತು. ಎರಡು ವಿಕೆಟ್​ ತೆಗೆದಿದ್ರೂ ನಾವು ಗೆಲ್ಲುತ್ತಿದ್ದೆವು. ದಿನೇಶ್​ ಕಾರ್ತಿಕ್​​, ಅನೂಜ್​ ರಾವತ್​​ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ್ರು ಅನ್ನೋದು ಖುಷಿ ವಿಚಾರ. ನಮ್ಮ ಬ್ಯಾಟರ್​ಗಳು ರನ್​ ಗಳಿಸದೇ ಇದ್ದಿದ್ದೇ ಸೋಲಿಗೆ ಕಾರಣ ಎಂದರು ಫಾಫ್​​.

 

ಆರ್ಸಿಬಿ ಕ್ರೇಜ್ ಯಾವತ್ತಿಗೂ ಕಡಿಮೆಯಾಗಿಲ್ಲ. ಕಡಿಮೆ ಆಗುವುದು ಇಲ್ಲ. ಎಷ್ಟೇ ಮ್ಯಾಚ್ ಸೋತರು ನಮ್ಮ ಆರ್ಸಿಬಿ ಅಂತಾನೇ ಹೊತ್ತು ಮೆರೆಸುತ್ತಾರೆ. ಪ್ರತಿ ಸಲ ಮ್ಯಾಚ್ ಬಂದರೂ ಈ ಸಲ ಕಪ್ ನಮ್ದೆ ಅನ್ನೋ ಸ್ಲೋಗನ್ ಕ್ರೋಸ್ ಕ್ರಿಯೇಟ್ ಮಾಡುತ್ತಾರೆ. ಕಪ್ ತಂದೇ ತರುತ್ತಾರೆ ಎಂಬ ನಂಬಿಕೆ ಇಡುತ್ತಾರೆ. ಅದೇ ಕ್ರೇಜ್ ಈಗಲೂ ಶುರುವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment