ನೀನೇನು ಪೂಜಾರಿನಾ ಅಂತ ಕೋರ್ಟ್ ಕೇಳಿದ್ಮೇಲೆ ಏನು ಮಾಡೋದು : ಪ್ರತಾಪ್ ಸಿಂಹ ಬೇಸರ

suddionenews
1 Min Read

 

ಮೈಸೂರು: ಬಾನು ಮುಷ್ತಾಕ ಅವರು ದಸರಾ ಉದ್ಘಾಟನೆ ಮಾಡುವುದಕ್ಕರ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರತಾಪ್ ಸಿಂಹ ಅವರು ಕೋರ್ಟ್ ಮೊರೆ ಹೋಗಿದ್ದರು. ಆದರೆ ಅವರ ಅರ್ಜಿಯನ್ನ ಹೈಕೋರ್ಟ್ ಮಾತ್ರವಲ್ಲ ಸುಪ್ರೀಂ ಕೋರ್ಟ್ ಕೂಡ ವಜಾ ಮಾಡಿದೆ. ಈ ಮೂಲಕ ಪ್ರತಾಪ್ ಸಿಂಹ ಹೋರಾಟಕ್ಕೆ ಸೋಲಾದಂತೆ ಆಗಿದೆ.

ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಅವರು, ನಾನು ಬಹಳ ಸ್ಪಷ್ಟವಾಗಿ ಮೊನ್ನೆನೆ ಹೇಳಿಕೆ ಕೊಟ್ಟಿದ್ದೇನೆ. ಹಗಲು ದರೋಡೆ ನಡೆದಂತ ಮೂಡಾದ 14 ಸೈಟುಗಳ ಪ್ರಕರಣವನ್ನೇ ಹೈಕೋರ್ಟ್ ನಲ್ಲಿ ವಜಾ ಮಾಡಲಾಗಿದೆ. ಎಂಡಿ ಸಮೀರ್ ಎಂಬಾತ ಅವಹೇಳನಕಾರಿಯಾಗಿ ವಿಡಿಯೋ ಮಾಡಿ, ಧರ್ಮಸ್ಥಳದ ಬಗ್ಗೆ ಅಪನಂಬಿಕೆಯನ್ನ ಮೂಡಿಸಿದಂತವನಿಗೆ ಮಂಗಳೂರಿನಲ್ಲಿ ನಿರೀಕ್ಷಣಾ ಜಾಮೀನನ್ನ ಕೊಡಲಾಯ್ತು. ಹಾಗೆ ಧರ್ಮಸ್ಥಳಕ್ಕೆ ಜೆಸಿಬಿ ನುಗ್ಗಿಸಿ ಧರ್ಮಸ್ಥಳ ದೇವಸ್ಥಾನವನ್ನು ಹೊಡೆಯಬೇಕೆಂದು ಹೇಳಿದ ಮಹೇಶ್ ತಿಮ್ಮಾರೋಡಿಯ ವಿರುದ್ಧ ಕೇಸ್ ದಾಖಲು ಮಾಡಲಿಲ್ಲ.

ಈ ಎಲ್ಲಾ ಉದಾಹರಣೆಗಳಿದ್ದರು ಕೂಡ ಒಂದು ಭರವಸೆಯೊಂದಿಗೆ ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದೆ. ಬರೀ ಸೆಕ್ಯುಲರಿಸಂ ಅನ್ನೋ ದುರ್ಬಿನ್ ಹಾಕೊಂಡು ಇಡೀ ಪ್ರಕರಣವನ್ನು ನೋಡಿದ್ರು. ನೀವೂ ಪೂಜಾರಿನಾ ಅಂತಾರೆ. ನಾನು ಪೂಜಾರಿ ಆಗಿರೋದಕ್ಕೆ ಸಾಧ್ಯನಾ ಹೇಳಿ. ಕೋರ್ಟ್ ಕೂಡ ಕೇಳುತ್ತೆ. ಈ ಪ್ರಶ್ನೆ ಮಾಡುವುದಕ್ಕೆ ನೀನು ಪೂಜಾರಿನಾ ಅಂತ ಕೇಳುತ್ತೆ. ಟ್ರಸ್ಟ್ ನಲ್ಲಿ ನೀನು ಇದ್ದೀಯಾ ಅಂತ ಕೇಳುತ್ತೆ. ದಸರಾವನ್ನು ಯಾರು ಉದ್ಘಾಟನರ ಮಾಡಬೇಕು ಎಂಬುದನ್ನ ಮುಖ್ಯಮಂತ್ರಿಗೆ ಬಿಟ್ಟು ಬಿಡ್ತೀವಿ ಅಂತ ತೀರ್ಮಾನ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Enable Notifications OK No thanks