Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗುರುತ್ವಾಕರ್ಷಣೆ ಇಲ್ಲದೆ 24 ಗಂಟೆಗಳು ಕಳೆದರೆ ದೇಹದಲ್ಲಿ ಏನಾಗುತ್ತದೆ?

---Advertisement---

24 ಗಂಟೆಗಳ ಕಾಲ ಗುರುತ್ವವಿಲ್ಲದ ಕೋಣೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ರಕ್ತಪರಿಚಲನೆ, ಸಮತೋಲನ ಮತ್ತು ಮೆದುಳಿನ ಕಾರ್ಯದಲ್ಲಿ ಗಣನೀಯ ಬದಲಾವಣೆ ಆಗುತ್ತದೆ. ಆರೋಗ್ಯವಂತ ವ್ಯಕ್ತಿ 24 ಗಂಟೆಗಳ ಕಾಲ ಶೂನ್ಯ ಗುರುತ್ವದಲ್ಲಿ ಇದ್ದರೆ ಕೆಲವೇ ನಿಮಿಷಗಳಲ್ಲಿ ದೇಹ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತದೆ ಎನ್ನುತ್ತಾರೆ ಗುರುಗ್ರಾಮ್ನ ಪಾರಸ್ ಹೆಲ್ತ್ನ ಇಂಟರ್ನಲ್ ಮೆಡಿಸಿನ್ ಮುಖ್ಯಸ್ಥರಾದ ಡಾ ಆರ್ ಆರ್ ದತ್ತಾ.

ಗುರುತ್ವವಿಲ್ಲದೆ ಇದ್ದಾಗ ಹೃದಯವು ರಕ್ತವನ್ನು ಮೇಲಕ್ಕೆ ಪಂಪ್ ಮಾಡಲು ಹೆಚ್ಚು ಶ್ರಮಪಡುವ ಅಗತ್ಯವಿರುವುದಿಲ್ಲ. ತೂಕವಿಲ್ಲದ ಸ್ಥಿತಿಯಲ್ಲಿ ಸುಗಮವಾಗಿ ಹೃದಯದಿಂದ ರಕ್ತವು ಮೆದುಳಿಗೆ ಮತ್ತು ದೇಹಕ್ಕೆ ಪಂಪ್ ಆಗುತ್ತದೆ. ಆರಂಭದಲ್ಲಿ ರಕ್ತದೊತ್ತಡದಲ್ಲಿ ಸೌಮ್ಯ ಏರಿಳಿತಗಳು ಇರಬಹುದು, ಆದರೆ ಪ್ಲಾಸ್ಮಾ ಪ್ರಮಾಣ ಕಡಿಮೆಯಾದಂತೆ ರಕ್ತದೊತ್ತಡ ಕಡಿಮೆಯಾಗಬಹುದು. 24 ಗಂಟೆಗಳಲ್ಲಿ ಈ ಹೃದಯ ಸಂಬಂಧಿ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳು ಈ ಬದಲಾವಣೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ

ಆರೋಗ್ಯಕರ ವ್ಯಕ್ತಿಗೆ ಶೂನ್ಯ ಗುರುತ್ವದಲ್ಲಿ ಒಂದು ದಿನ ಕಳೆಯುವುದು ಅಹಿತಕರವೆನಿಸಬಹುದು ಆದರೆ ಹಾನಿಕರವಲ್ಲ. ಮುಖ ಊದಿಕೊಳ್ಳಬಹುದು, ವಾಕರಿಕೆ, ತಲೆತಿರುಗುವಿಕೆ ಮತ್ತು ತಾತ್ಕಾಲಿಕ ಸಮನ್ವಯದ ಬದಲಾವಣೆಯನ್ನು ಎದುರಿಸಬಹುದು. ಆದರೆ, ಶಾಶ್ವತವಾದ ಸ್ನಾಯು ಅಥವಾ ಮೂಳೆ ಹಾನಿಯಾಗುವುದಿಲ್ಲ. ಗುರುತ್ವಾಕರ್ಷಣೆ ಇಲ್ಲದೆ ಇದ್ದಾಗಲೂ ಮಾನವ ದೇಹ ಬೇಗನೇ ಹೊಂದಿಕೊಳ್ಳುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now