ಅಮ್ಮನನ್ನ ಮುದ್ದು, ಬಂಗಾರ ಅಂತಿದ್ರು : ಕಮಲಾಕರ್ ಜ್ಯೋತಿಷಿ ಬಗ್ಗೆ ಆ ಯುವತಿ ಹೇಳಿದ್ದೇನು..?

1 Min Read

ಶಿವಮೊಗ್ಗ: ಸುಚಿತ್ರಾ ಮತ್ತು ಕಮಲಾಕರ್ ಭಟ್ ಅಕ್ರಮ ಸಂಬಂಧದಿಂದ ಒಂದು ಜೀವ ಹೋಗಿದೆ. ಈ ಸಂಬಂಧ ತನಿಖೆಯೂ ಚುರುಕುಗೊಂಡಿದೆ. ಮಹೇಶ್ ಪುತ್ರಿ ಜ್ಯೋತಿಷಿ ಬಗ್ಗೆ ಮಾತನ್ನಾಡಿದ್ದಾರೆ. ತನ್ನ ತಾಯಿಯನ್ನ ಆ ಜ್ಯೋತಿಷಿ ಏನಂತ ಕರಿತಿದ್ರು ಎಂಬುದನ್ನ ಹೇಳಿದ್ದಾರೆ. ಅಷ್ಟೇ ಅಲ್ಲ ಅಮ್ಮನೇ ವಿಷ ಹಾಕಿ ಮುಗಿಸುತ್ತೀನಿ ಎಂಬ ಮಾತನ್ನ ಹೇಳಿದ್ದಳು ಎಂಬ ಭಯಾನಕ ಸತ್ಯವನ್ನ ಬಾಯ್ಬಿಟ್ಟಿದ್ದಾಳೆ.

ನಾವೂ ಮೊದಲಿನಿಂದಲೂ ಸಿದ್ದಾಪುರದಲ್ಲಿಯೇ ಇದ್ದೆವು. 9 ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದೆವು. ಇಲ್ಲಿ ನನ್ನ ತಾಯಿಗೆ ಕಮಲಾಕರ್ ಭಟ್ ಗುರೂಜಿಯ ಪರಿಚಯವಾಯ್ತು‌. ಆತ ಶಿವಮೊಗ್ಗದಲ್ಲಿ ನನಗೆ ಕಾಲ್ ಸೆಂಟರ್ ಕೆಲಸ ಕೊಡಿಸಿದ್ದ. ಆದರೆ ಅಮ್ಮ ಇಲ್ಲದ ಸಮಯದಲ್ಲಿ ಆತ ನನಗೆ ತುಂಬಾ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಅಮ್ಮನಿಗೆ ಹೇಳಿದರೂ ಆಕೆ ಗುರೂಜಿಯ ಪರವಾಗಿಯೇ ಇದ್ದಳು.

ಮೊನ್ನೆ ಒಂದು ದಿನ ನೀನು ನಿನ್ನ ಅಪ್ಪನ ಜೊತೆಗೆ ಹೋಗು. ಇಲ್ಲದಿದ್ದರೆ ವಿಷ ಹಾಕಿ ಮುಗಿಸುತ್ತೇನೆ ಎಂದು ಅಮ್ಮನೆ ಬೆದರಿಕೆ ಹಾಕಿದ್ದಳು. ಅಮ್ಮ ಮತ್ತು ಗುರೂಜಿ ಒಂದೇ ರೂಮಿನಲ್ಲಿ ಇರುತ್ತಿದ್ದರು. ಗುರೂಜಿ ನನ್ನ ತಾಯಿಯನ್ನು ಚಿನ್ನ, ಬಂಗಾರ, ಮುದ್ದು ಅಂತೆಲ್ಲಾ ಕರೆಯುತ್ತಿದ್ದ. ನಮ್ಮಿಬ್ಬರ ನಡುವೆ ಜಗಳ ತಂದಿಡುತ್ತಿದ್ದ. ಇದರಿಂದ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದೆ ನಾನು. ನನ್ನ ತಂದೆಯನ್ನೂ ಮುಗಿಸಲು ಇವರಿಬ್ಬರು ಸೇರಿ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಹಿಂದಿ ಮಾತನ್ನಾಡುವ ಐವರಿಗೆ ಸುಪಾರಿ ಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ.

Share This Article
Enable Notifications OK No thanks