Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಾಕಿಸ್ತಾನದ ಮೇಲಿನ ಯುದ್ದಕ್ಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು..?

---Advertisement---

ವಿಜಯಪುರ; ಇವತ್ತು ಇಡೀ ವಿಶ್ವವೇ ಕೇಳ್ತಾ ಇದೆ. ಪಹಲ್ಗಾಮ್ ಮೇಲೆ ಆಗಿರುವಂತ ದಾಳಿಯನ್ನ ಖಂಡಿಸ್ತಾ ಇದಾರೆ. ಪ್ರವಾಸಕ್ಕೆ ಹೋದವರನ್ನ ಏನು ಹತ್ತಿಕ್ಕಿದ್ದಾರೆ ಅದು ಅತ್ಯಂತ ಹೀನಾಯವಾದ ಕೃತ್ಯ ಹಾಗೂ ಹೇಡಿತನದ ಕೃತ್ಯವಾಗಿದೆ. ಎಲ್ಲರೂ ಕೂಡ ಖಂಡಿಸ್ತೀವಿ. ಅವರನ್ನ ನಾವೂ ಹುಡುಕಾಡಿ ತೆಗೆದು ಅವರನ್ನ ಕೊಲ್ಲಬೇಕಿದೆ. ಅದರಲ್ಲಿ ಎರಡು ಮಾತಿಲ್ಲ. ನಾನು ಅವತ್ತು ಕೂಡ ಇದನ್ನೇ ಹೇಳಿದ್ದಿದ್ದು. ಪಾಕಿಸ್ತಾನವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಲೆ ಗುಂಪು ಮಾಡಬೇಕು. ಪಾಕಿಸ್ತಾನದ ಜೊತೆಗಿರುವ ಸಂಬಂಧವನ್ನ ಎಲ್ಲಾ ರಾಷ್ಟ್ರಗಳು ಕಡಿದುಕೊಳ್ಳಬೇಕು. ಯಾರೂ ಕೂಡ ಪಾಕಿಸ್ತಾನಕ್ಕೆ ಸಹಾಯ ಮಾಡಬಾರದು ಎಂದು ಸಚಿವ ಎಂ.ಬಿ.ಪಾಟೀಲ್ ಹೌಹಾರಿದ್ದಾರೆ.

ಇಲ್ಲಿ ನಾವೂ ಒಂದು ಭಾಗ.‌ ಅಲ್ಲಿ ಅನೇಕ ಮುಸಲ್ಮಾನರು ನಮ್ಮವರ ಜೀವವನ್ನ ಉಳಿಸಿದ್ದಾರೆ. ಅಲ್ಲಿ ಇತ್ತೀಚೆಗೆ ವ್ಯಾಪಾರ ಅಭಿವೃದ್ಧಿಯಾಗಿತ್ತು. ಅದನ್ನ ಈ ಉಗ್ರರು ಬಂದು ಹಾಳು ಮಾಡಿದ್ರು. ಸಿಎಂ ಕೂಡ ಕಣ್ಣೀರು ಹಾಕಿದ್ರು. ನಾವೂ ರಕ್ಷಣೆ ಮಾಡೋದಕ್ಕೆ ಆಗಿಲ್ಲ ಅಂತಾನು ಬೇಸರ ಮಾಡಿಕೊಂಡರು. ಕಾಶ್ಮೀರದ ಸ್ಥಳೀಯರು ಕೂಡ ಭಾರತದ ಜೊತೆಗೆ ಇದಾರೆ. ಅವರೆಲ್ಲರ ಭಾವನೆ ಏನಾಗಿತ್ತು ಅಂದ್ರೆ ಅಲ್ಲಿ ಶಾಂತಿ ನೆಲೆಸಬೇಜು, ಪ್ರವಾಸ ಮತ್ತೆ ಅಭಿವೃದ್ಧಿಯಾಗಬೇಕು ಎಂಬುದು. ಸಹಬಾಳ್ವೆ ಮಾಡಬೇಕು ಎಂದು ಕಾಶ್ಮೀರದ ಜನತೆ ಬಯಸುತ್ತಿದ್ದಾರೆ.

ಈ ಉಗ್ರರಿಗೆ ಟೂರಿಸಂ ಡಿಸ್ಟರ್ಬ್ ಮಾಡಬೇಕು, ಎಕಾನಮಿ‌ ಮೇಲೆ ಹೊಡೆತ ಬೀಳಬೇಕು ಎಂಬುದಿತ್ತು. ಎಲ್ಲಾ ಜಾತಿ, ಧರ್ಮದವರು ಇದನ್ನ ಖಂಡನೆ ಮಾಡಿದ್ದಾರೆ. ಕಾಶ್ಮೀರದಲ್ಲಿರುವವರು ಎಲ್ಲರು ಭಾರತೀಯರು. ಚೈನಾದವರು ಇವತ್ತು ಏರ್ ಫೋರ್ಸ್ ಕೊಡ್ತಾ ಇದಾರೆ. ವಿಮಾನ ಕೊಡ್ತಾ ಇದಾರೆ ಅಂತ. ಅವರೆಲ್ಲ ಮನವರಿಕೆ ಮಾಡಿಕೊಳ್ಳಬೇಕು. ಟೆರರಿಸಂನ ಸಪೋರ್ಟ್ ಮಾಡಬಾರದು ಎಂದು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...