ಬೇರೆಯವರ ಮಸಾಲೆಯಿಂದ ನಾವು ಅಡಿಗೆ ಮಾಡಲ್ಲ: ಸಿ ಟಿ ರವಿ

suddionenews
1 Min Read

 

ಬೆಂಗಳೂರು: ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಆಂತರಿಕ ಹಾಗೂ ಗ್ರೌಂಡ್ ರಿಪೋರ್ಟ್ ಬಿಜೆಪಿ ಪರ ಇದೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಬಿಜೆಪಿ ಕಚೇರಿಯಲ್ಲಿ ಸಿ ಟಿ ರವಿ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ಕ್ಷೇತ್ರ ಗಳಿಗೂ ಹಲವರ ಬಗ್ಗೆ ಚರ್ಚೆ ಆಗಿದೆ.

ಅದರಲ್ಲಿ ಮೂರು ಎರಡು ಹೆಸರುಗಳನ್ನು ಫೈನಲ್ ಮಾಡಿ, ಕೇಂದ್ರಕ್ಕೆ ಕಳುಹಿಸಿಕೊಡುವ ಅಧಿಕಾರವನ್ನು ರಾಜ್ಯಾಧ್ಯಕ್ಷ ರಿಗೆ ಕೊಟ್ಟಿದ್ದೇವೆ ಎಂದರು.

ಮೊದಲ ಆದ್ಯತೆ ನಮಗೆ ಎರಡು ಕ್ಷೇತ್ರ ಗಳಲ್ಲು ಗೆಲ್ಲಬೇಕು ಎನ್ನುವುದು. ನಮ್ದು ಏನಿದ್ರು ಆಂತರಿಕ ರಿಪೋರ್ಟ್ ಹಾಗೂ ಕೋರ್ ಕಮಿಟಿ ಚರ್ಚೆಯ ಬಗ್ಗೆ ಕೇಂದ್ರಕ್ಕೆ ಕಳುಹಿಸಿಕೊಡೋದು ಅಷ್ಟೇ.
ಅಂತಿಮವಾಗಿ ಟಿಕೆಟ್ ಯಾರಿಗೆ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ನಾವು ನಮ್ಮ ಮಸಾಲಾ ಮೇಲೆ ಅಡುಗೆ ಮಾಡೋರು,ಬೇರೆಯವರ ಮಾಸಾಲಾ ಮೇಲೆ ಅಡುಗೆ ಮಾಡೋರಲ್ಲ.ಜೆಡಿಎಸ್ ಯಾರಿಗೆ ಟಿಕೆಟ್ ಕೊಟ್ರೆ ಕಾಂಗ್ರೆಸ್ ಗೆ ಏನು.?
ಬೇರೆಯವರ ಮನೆಯ ಅಡುಗೆ ಮನೆ , ಬೆಡ್ ರೂಮ್ ನೋಡೊದು ಒಳ್ಳೆಯದಲ್ಲ ನಾವು ನಮ್ಮ ಬಳಿ ಇರೊ ಮಸಾಲಾದ ಮೇಲೆ ಅಡುಗೆ ಮಾಡಿ ಬಡಿಸ್ತೇವೆ ಯಾವ ಪಕ್ಷ ಯಾರಿಗೆ ಟಿಕೆಟ್ ನೀಡಿದ್ರೆ ನಮಗೇನು ಎಂದರು..

Share This Article
Leave a Comment

Leave a Reply

Your email address will not be published. Required fields are marked *