Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಾತಿ ಗಣತಿ ವರದಿಯಲ್ಲಿ ಗೊಲ್ಲ ಮತ್ತು ಯಾದವರನ್ನ ಬೇರ್ಪಡಿಸಿದರಾ..? ವಿರೋಧವೇಕೆ..?

---Advertisement---

ಬೆಂಗಳೂರು; ಜಾತಿ ಗಣತಿ ವರದಿ ರಿಲೀಸ್ ಆಗುವುದಕ್ಕೂ ಮುನ್ನವೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಅಂಕಿ ಅಂಶಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ವಿರೋಧವೂ ಜೋರಾಗಿದೆ. ಇದೀಗ ಗೊಲ್ಲ ಮತ್ತು ಯಾದವ ಸಮುದಾಯದವರು ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗೊಲ್ಲ ಸಮುದಾಯದ ಸಂಖ್ಯೆ 30 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಒಟ್ಟಾರೆಯಾಗಿ ಗೊಲ್ಲರು ಅತಿ ಹಿಂದುಳಿದ ವರ್ಗಗಳಲ್ಲಿದ್ದಾರೆ. ಇವರನ್ನ ಕೆಲವರು ಗೊಲ್ಲರು ಅಂತಾರೆ, ಯಾದವ, ಹಣಬಾರ್, ಕಾಡುಗೊಲ್ಲ ಸಮುದಾಯಗಳು ಅಂತೆಲ್ಲಾ ಹೆಸರನ್ನಿಟ್ಟಿದ್ದಾರೆ. ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ರೀತಿಯ ಹೆಸರಿನಲ್ಲಿ ಕರೆಯುತ್ತಾರೆ. ಈ ಸಮುದಾಯ ಈ ಹಿಂದಿನ ವರದಿಗಳಲ್ಲಿ ಪ್ರವರ್ಗ -1 ರಲ್ಲಿ ಇರುತ್ತಾ ಇತ್ತು. ಆದರೆ ಜಾತಿಗಣತಿ ವರದಿಯಲ್ಲಿ ಪ್ರವರ್ಗ -1A ನಲ್ಲಿ ಸೇರಿಸಲಾಗಿದೆ. ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಪ್ರವರ್ಗ 1A ನಲ್ಲಿ ಸೇರಿಸಿದ್ದರೆ, ಯಾದವರನ್ನ ಪ್ರವರ್ಗ -1Bಗೆ ಸೇರಿಸಿದ್ದಾರೆ.

ಇಲ್ಲಿ ಗೊಲ್ಲ ಮತ್ತು ಯಾದವ ಸಮುದಾಯದವರನ್ನ ಬೇರ್ಪಡಿಸಲಾಗಿದೆ. ಯಾದವರು ಕೂಡ ಗೊಲ್ಲ ಜಾತಿಗೆ ಸೇರಿದವರಾಗಿದ್ದಾರೆ. ಗೊಲ್ಲರು ಹಾಗೂ ಕಾಡು ಗೊಲ್ಲರು ಮಾತ್ರ ಒಂದೇ ಅಲ್ಲ ಈ ಮೇಲಿನ ಎಲ್ಲಾ ಜಾತಿಗಳು ಒಂದೇ. ಹೀಗೆ ಬೇರೆ ಬೇರೆ ಮಾಡುವುದು ಬೇಡ ಎಂದು ಗೊಲ್ಲ ಸಮುದಾಯದವರು ಆಗ್ರಹ ಮಾಡುತ್ತಿದ್ದಾರೆ. ಜಾತಿಗಣತಿ ವರದಿಯ ಅಂಕಿ ಅಂಶಗಳು ಬಂದ ಬೆನ್ನಲ್ಲೇ ಮತ್ತಷ್ಟು ವಿರೋಧ ವ್ಯಕ್ತವಾಗ್ತಾ ಇದೆ. ಈಗ ಗೊಲ್ಲರು ಹಾಗೂ ಯಾದವರು ಕೂಡ ಜಾತಿ ಗಣತಿ ವರದಿಯನ್ನು ವಿರೋಧಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment