ತುಮಕೂರು: ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಯ ವಿಚಾರವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ನಂತರ ಡಿಕೆ ಶಿವಕುಮಾರ್ ಸಿಎಂ ಖುರ್ಚಿಗಾಗಿ ಕಾಯ್ತಾ ಇದ್ದಾರೆ. ಇತ್ತ ಜಿ ಪರಮೇಶ್ವರ್ ಕೂಡ ಸಿಎಂ ಕನಸು ಕಂಡಿದ್ದಾರೆ. ಈ ಬಗ್ಗೆ ಇದೀಗ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು, ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸುರೇಶ್ ಗೌಡ ಅವರು, ಇದು ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟಂತ ವಿಚಾರ. ಈಗಾಗಲೇ ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಯುದ್ಧ ನಡೆದು ಆಡಳಿತ ಕುಸಿದು ಬಿದ್ದೋಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಈ ಬಿಟ್ಟಿ ಭಾಗ್ಯಗಳಿಂದ ಒಂದು ರೂಪಾಯಿ ಅಭಿವೃದ್ಧಿ ಕೆಲಸವಾಗಿಲ್ಲ. ಇವತ್ತು ಗಟ್ಟಿಯಾಗಿ ಡಿಕೆ ಶಿವಕುಮಾರ್ ಅವರನ್ನು ಇಳಿಸಲೇಬೇಕು ಅಂತ ಕೂತವ್ರೆ. ಅದಕ್ಕೆ ಖರ್ಗೆ ಅವರು ಮಧ್ಯಪ್ರವೇಶ ಮಾಡಿದ್ದಾರೆ. ನನಗೂ ಕೂಡ ಅನ್ಯಾಯವಾಗಿದೆ. ಎಸ್ ಎಂ ಕೃಷ್ಣ ಕಾಲದಲ್ಲಿ ನಾನು ಸರ್ಕಾರ ತಂದೆ. ಆದರೆ ನಾನು ಮುಖ್ಯಮಂತ್ರಿ ಆಗೋದಕ್ಕೆ ಆಗ್ಲಿಲ್ಲ ಅಂತ.

ಎಂಟು ಬಾರಿ ಶಾಸಕನಾಗಿ, ಪಾರ್ಲಿಮೆಂಟ್ ಸದಸ್ಯನಾದರೂ ನನಗೆ ಆ ಅವಕಾಶ ಸಿಕ್ಕಿಲ್ಲ. ಸಿಕ್ಕರೆ ನಾನು ಸಿಎಂ ಆಗ್ತೇನೆ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಆಗ್ತಾರೋ ಪರಮೇಶ್ವರ್ ಅವರು ಆಗ್ತಾರೋ ಗೊತ್ತಿಲ್ಲ. ಸ್ವಾಮೀಜಿಗಳು ಅವರವರ ಅಭಿಪ್ರಾಯಗಳನ್ನ ಹೇಳ್ತಾರೆ. ಸ್ವಾಮೀಜಿಯವರು ಅಭಿಪ್ರಾಯ ಹೇಳಿದ ಕೂಡಲೆ ಆಗುತ್ತಾ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದ್ರೆ ಆಗುತ್ತೆ. ಪರಮೇಶ್ವರ್ ಅವರು ನಮ್ಮ ಜಿಲ್ಲೆಯವರು. ಸಜ್ಜನ ರಾಜಕಾರಣಿಗಳು. ಜಿಲ್ಲೆಯಲ್ಲಿ ಎಲ್ಲರನ್ನು ಪ್ರೀತಿ ಮಾಡ್ತಾರೆ, ಯಾರ ಮೇಲೂ ದ್ವೇಷಿಸಲ್ಲ ಎಷ್ಟೇ ಶ್ರೀಮಂತಿಕೆ ಇದ್ದರು ಎಲ್ಲರನ್ನು ಪ್ರೀತಿ ಮಾಡ್ತಾರೆ. ಅವರು ಸಿಎಂ ಆದ್ರೆ ತುಮಕೂರು ಜಿಲ್ಲೆ ಅಭಿವೃದ್ಧಿಯಾಗುತ್ತೆ ಎಂದಿದ್ದಾರೆ.















