ಗಾಂಜಾ ಮತ್ತಿಂದ ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಕೊಲೆಯಾಯ್ತಾ..?

1 Min Read

ಶಿವಮೊಗ್ಗ: ವಿದ್ಯಾರ್ಥಿಗಳೇ ಹೊಡೆದಾಡಿಕೊಂಡ ಪರಿಣಾಮ ಎಸ್ಎಸ್ಎಲ್ಸಿ ಓದುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಪ್ರಾಣವೇ ಹೋಗಿದೆ. ಅದಕ್ಕೆಲ್ಲ ಗಾಂಜಾ ಮತ್ತೇ ಕಾರಣ ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗ್ತಾ ಇದೆ. ಈ ಸಂಬಂಧ ಶಿವಮೊಗ್ಗದ ಎಸ್ಪಿ ನಿಖಿಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಸೂಳೇಬೈಲು ಎಂಬ ಜಾಗದಲ್ಲಿ ನಿನ್ನೆ ರಾತ್ರಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆಯಾಗಿ, ಅವನು‌ ಮರಣವನ್ನು ಹೊಂದಿದ್ದ. ಈ ಅಪ್ರಾಪ್ತನನ್ನು ಏಳು ಜನ ಕೈಯಲ್ಲಿ ಗುದ್ದಿದ್ದರು ಎಂದು ಪ್ರಥಮ ಮಾಹಿತಿ ದೊರಕಿತ್ತು. ಇದಕ್ಕೆ ಮೂಲ ಕಾರಣ, ಒಂದು ಕ್ರಿಕೆಟ್ ಮ್ಯಾಚ್ ನಲ್ಲಿ ಆಗಿದ್ದಂತ ವಾಗ್ವಾದ. ಆ ವಾಗ್ವಾದದ ಮೇರೆಗೇನೆ ಮತ್ತೊಬ್ಬ ಬಾಲಕನನ್ನು ಕೇಳಲು ಬಂದಾಗ, ಮೃತ ಬಾಲಕ ಬಿಡಿಸುವುದಕ್ಕೆ ಹೋಗಿದ್ದಾನೆ. ಆತನಿಗೂ ಜೋರಾಗಿ ಏಟು ಬಿದ್ದ ಕಾರಣ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಗ ಆತನನ್ನು ಆಸ್ಪತ್ರೆಗೆ ಸೇರಿಸಿದಾಗ ನಿಧನ ಅನ್ನೋದು ಗೊತ್ತಾಗಿದೆ. ಹೀಗಾಗಿ ರಾತ್ರಿಯೇ ಏಳು ಜನ ಆರೋಪಿಗಳನ್ನ ಅರೆಸ್ಟ್ ಮಾಡಿದ್ದೀವಿ.

ಈ ಸಂಬಂಧ ವಿಚಾರಣೆ ಕೂಡ ನಡೆಸಲಾಗುತ್ತದೆ. ಮೆಡಿಕಲ್ ಟೆಸ್ಟ್ ಗೆ ತಕ್ಷಣವೇ ಕಳುಹಿಸಿ ಕೊಡಲಾಗಿದೆ. ಅಲ್ಲಿಂದ ವರದಿ ಏನು ಬರುತ್ತೆ, ಆ ಸೆಕ್ಷನ್ ಗಳನ್ನ ಸೇರಿಸಿ, ಶಿಕ್ಷೆ ಕೊಡಿಸಲಾಗುತ್ತದೆ. ಸ್ಥಳೀಯರು ಕೂಡ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಆ ಸಂಬಂಧ ಸರಿಯಾದ ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ವಿಶೇಷ ತಂಡವನ್ನ ರಚನೆ ಮಾಡಿ, ತನಿಖೆಯನ್ನ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅತ್ತ ಸಾವಿರಾರು ಕನಸು ಕಂಡಿದ್ದ ಮಗನ ಭವಿಷ್ಯ ಇಂದು ಪೋಷಕರ ಕಣ್ಮುಂದೆಯೇ ಮಣ್ಣಾಗಿದೆ. ಹೆತ್ತ ಕರುಳು ಮನದಲ್ಲಿ ದುಃಖದ ಮಡುಗಟ್ಟಿದೆ.

Share This Article
Enable Notifications OK No thanks