ಶಾಲೆಗಳಿಂದ ದಸರಾ ರಜೆ ಆದೇಶ ಉಲ್ಲಂಘನೆ, ಸರ್ಕಾರ ಕ್ರಮಕೈಗೊಳ್ಳಲಿ : ಪ್ರಮೋದ್ ಮುತಾಲಿಕ್ ಆಗ್ರಹ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ರಾಜ್ಯ ಸರ್ಕಾರ ನೀಡಿರುವ ದಸರಾ ರಜೆಗಳ ಆದೇಶವನ್ನು ಕಾನ್ವೆಂಟ್ ಶಾಲೆಗಳು ಉಲ್ಲಂಘನೆ ಮಾಡಿ, ಶಾಲೆಗಳನ್ನು ನಡೆಸುತ್ತಿರುವ ಬಗ್ಗೆ ಶ್ರೀರಾಮ ಸೇನೆಯ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಬ್ಬಗಳನ್ನು ಆಚರೆಣೆ ಮಾಡಲೆಂದು ಸರ್ಕಾರ ದಸರಾ ರಜೆ ಘೋಷಣೆ ಮಾಡಿ ಆದೇಶನ್ನು ನೀಡದೆ. ಆದರೆ ಕಾನ್ವೆಂಟ್ ಶಾಲೆಗಳು ದಸರಾ ರಜೆ ನೀಡದೆ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಕಾನ್ವೆಂಟ್ ಶಾಲೆಗಳಲ್ಲಿ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾಗೂ ಬಸವೇಶ್ವರವರ ಭಾವಚಿತ್ರ ಕೂಡ ಹಾಕದೇ ಸರ್ಕಾರದ ಸೂಚನೆ ಪಾಲಿಸಲಾಗುತ್ತಿಲ್ಲ. ಕೆಲವೊಂದು ಕಡೆ ರಾಷ್ಟ್ರೀಯ ಹಬ್ಬಗಳ ಆಚರಣೆಯೂ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಈ ತಪ್ಪುಗಳನ್ನು ಸರಿ ಪಡಿಸಿಬೇಕು ಎಂದು ಶ್ರೀ ರಾಮ ಸೇನೆ ಆಗ್ರಹಿಸುತ್ತದೆ ಎಂದರು.

ಕಾನ್ವೆಂಟ್ ಶಾಲೆಗಳಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಹಿಂದೂಗಳೇ ಇದ್ದಾಗ ದಸರಾ ರಜೆ ರದ್ದು ಮಾಡಿ, ಶಾಲೆ ನಡೆಸುತ್ತಿರುವವರ ಶಾಲಾ ಆಡಳಿತದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ದಸರಾ ರಜೆ ದಿನಗಳಲ್ಲಿ ಪರೀಕ್ಷೆ ಘೋಷಣೆ ಮಾಡಿದ್ದಾರೆ. ಇದು ಅಪಾಯಕಾರಿಯಾಗಿದೆ. ಶಿಕ್ಷಕರು. ಪೋಷಕರು, ಮಕ್ಕಳು ಸೇರಿ ಎಲ್ಲರೂ ಮುಕ್ತವಾಗಿ ಹಬ್ಬವನ್ನು ಆಚರಿಸಲು ಆಗುವುದಿಲ್ಲ. ಅವರನ್ನು ಹಬ್ಬದಿಂದ ವಂಚಿಸಲಾಗುತ್ತಿದೆ. ಆದ ಕಾರಣ ಪರೀಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕು. ಈ ಕುರಿತು ಪಾಲಕರು, ಪೋಷಕರು ತಕರಾರು ಮಾಡಿದ್ದಲ್ಲಿ ಅವರನ್ನು ಬೆದರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ತಕರಾರು ಮಾಡಿದ ಪಾಲಕರ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ ಆದ್ದರಿಂದ ಕೂಡಲೇಪರೀಕ್ಷೆಯನ್ನು ತಡೆದು ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾನ್ವೆಂಟ್ ಶಾಲೆಗಳಲ್ಲಿ 05 ಪ್ರತಿ ಶತದಿಂದ ಶೇಕಡ 10 ರಷ್ಟು ಮಾತ್ರ ಕ್ರಿಶ್ಚಿಯನ್ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಹು ಸಂಖ್ಯಾತ ಹಿಂದೂ ವಿದ್ಯಾರ್ಥಿಗಳು ಇದ್ದರೂ ಸಹ ಕ್ರಿಸ್ಮಸ್ ಹಬ್ಬಕ್ಕೆ ಕಡ್ಡಾಯ 10 ದಿನಗಳ ರಜೆ ಘೋಷಿಸಲಾಗುತ್ತದೆ ಈ ತಪ್ಪನ್ನು ಸಹ ಕೂಡಲೇ ಸರಿಪಡಿಸಬೇಕು ಎಂದರು.

ಮಹಾತ್ಮ ಗಾಂಧೀಜೀ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರರವರ ಭಾವಚಿತ್ರ ಕಡ್ಡಾಯವಾಗಿ ಕಾನ್ವೆಂಟ್ ಶಾಲೆಗಳಲ್ಲಿ ಇರುವುದನ್ನು ಅಧಿಕಾರಿಗಳು ದೃಢಪಡಿಸಬೇಕು. ಸಾಕಷ್ಟು ಶಾಲೆಗಳಲ್ಲಿ ರಾಷ್ಟ್ರೀಯ ಉತ್ಸವದ ಕನ್ನಡ ರಾಜ್ಯೋತ್ಸವ ತಿರಸ್ಕಾರ ಮಾಡಿ, ಹಿಂದೂ ಹಬ್ಬಗಳಿಗೆ, ಹಿಂದೂ ಆಚರಣೆಗಳಿಗೆ ಹಾಗೂ ಹಿಂದೂ ವಿದ್ಯಾರ್ಥಿ, ಶಿಕ್ಷಕರಿಗೆ, ಮಾನಸಿಕ, ಆರ್ಥಿಕವಾಗಿ ತೊಂದರೆ ಕೊಡುತ್ತಿದ್ದು, ಇದು ಕೂಡಲೇ ನಿಲ್ಲಿಸಬೇಕು ಮತ್ತು ಕಡ್ಡಾಯವಾಗಿ ರಾಷ್ಟ್ರೀಯ ಉತ್ಸವಗಳನ್ನು ಆಚರಿಸಿ ಅದರ ವರದಿಯನ್ನು ತರಿಸಿ ಕೊಡಬೇಕು ಎಂದರು.

Share This Article
Enable Notifications OK No thanks