Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಧರ್ಮ ಪಂಚಪೀಠದ ವಿರುದ್ದ ವಚನಾನಂದ ಶ್ರೀ ಕಿಡಿ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ, ಸೆ. 16 : ನಾವು ಹಿಂದೂಗಳ ಭಾಗ ಎಂದು ಹೇಳುವ ಪಂಚಪೀಠದವರು ಭಕ್ತರಿಗೆ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಲು ಹೇಳುವ ಮೂಲಕ ಸಾಕಷ್ಟು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಪಂಚಮಸಾಲಿ ಪೀಠದ ವಚನಾನಂದ ಶ್ರೀ ಕಿಡಿ ಕಾರಿದ್ದಾರೆ.

ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಪೀಠದವರು ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕು ಆದರೆ ಇಲ್ಲಿ ಮಠಾಧೀಶರಿಗೆ ಒಂದು ಪಥ ಭಕ್ತರಿಗೊಂದು ಪಥವನ್ನು ಮಾಡಿದ್ದಾರೆ. ಮಾನ್ಯತೆ ಸಿಕ್ಕರೆ ಅಧಿಕೃತವಾಗಿ ಧರ್ಮ ಬರೆಸೋಣ, ಇತರೆ ಬರೆಸಿ ತೃತೀಯ ಲಿಂಗಿಗಳಾಗುವುದು ಬೇಡ ಎಂದು ವ್ಯಂಗ್ಯವಾಡಿದರು.

ವೀರಶೈವ ಮಹಾಸಭಾ ಗೊಂದಲದಲ್ಲಿದ್ದು, ಜಾತಿ ಮತ್ತು ಧರ್ಮ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳಿ ಜನರಲ್ಲು ಗೊಂದಲ ಸೃಷ್ಟಿಸುತ್ತಿದೆ. ಲಿಂಗಾಯತ ಧರ್ಮ ಚಳುವಳಿ ಮಾಡುವವರು ಕೇಂದ್ರ ಸರ್ಕಾರದ ಬಳಿ ಹೋಗಿ ಕೇಳಿಲ್ಲ. ಲಿಂಗಾಯತರಲ್ಲಿ ಬಹುತೇಕರು ಲಿಂಗ ಪೂಜೆಯನ್ನು ಬಿಟ್ಟಿದ್ದಾರೆ. ಅನೇಕರು ಮಾಂಸಹಾರ ಸೇವನೆ ಮಾಡುತ್ತಿದ್ದಾರೆ. ಅಂತಹವರಿಗೆ ನಾವು ಲಿಂಗಪೂಜೆ, ಅಹಿಂಸಾ ತತ್ವ ಪಾಲನೆ ಮಾಡಲು ಹೇಳಿಕೊಡ ಬೇಕಿದೆ ಎಂದರು.

ಬಸವ ಐಡಿಯಾಲಜಿ ಜತೆ ಎಡಪಂಥೀಯ, ಕಮುನಿಷ್ಟ ತತ್ವ ಮಿಶ್ರಣ ಮಾಡಿದ್ದು, ಕೊರಳಲ್ಲಿ ಲಿಂಗವಿಲ್ಲದವರು ನಮಗೆ ತತ್ವ ಹೇಳಲು ಬಂದಿದ್ದಾರೆ. ಬಸವಣ್ಣನ ಹೆಸರಿನಲಿ ನಿಮಗೆ ತಿಳಿದಂತೆ ಹೇಳಬೇಡಿ ಎಂದು ತಿಳಿ ಹೇಳಿ ಕಳೆದ ಸಮೀಕ್ಷೆಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಿದ್ದರು. ಅದೇ ರೀತಿ ಈಗಲೂ ಹಿಂದುಳಿದ ಆಯೋಗದಿಂದ ಹಲವು ಜಾತಿಗಳ ಹೆಸರು ತಪ್ಪಾಗಿ ನೀಡಿ ಮತ್ತೇ ಗೊಂದಲ ಉಂಟು ಮಾಡಿದ್ದಾರೆ ಎಂದು ಹೇಳಿದ ಅವರು, ನಾಳೆ ಬೆಂಗಳೂರಿನಲ್ಲಿ 3 ಪಂಚಮಸಾಲಿ ಪೀಠದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಾತಿ ಗಣತಿಯಲ್ಲಿ ಏನು ಬರೆಸಬೇಕೆಂಬ ಬಗ್ಗೆ ತೀರ್ಮಾನ ಮಾಡಲಾಗುವುದು. ಅಂತೇಯೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು ಎಂದು ಕರೆ ನೀಡಿದರು.

ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಸವಾದಿ ಶರಣರ ತತ್ವ ಹೇಳಲಿ, ಹಿಂದೂಗಳನ್ನು ಬೈಯುವುದು, ಗಣೇಶೋತ್ಸವ ಬೈಯುವುದು ಬೇಡ. ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ನಾಡಿನ ಗಮನ ಸೆಳೆದಿದೆ. ಭಕ್ತಿ, ಶ್ರದ್ಧೆ, ಅನೇಕತೆಯಲ್ಲಿ ಏಕತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಹಿಂದೂ ಧರ್ಮದಲ್ಲಿ ನಮಗೆ ಎಲ್ಲವೂ ಸಿಗುತ್ತಿದೆ. ಆದರೂ ಹಿಂದೂಗಳ ವಿರುದ್ಧವೇ ಮಾತನಾಡುತ್ತ ಪ್ರತ್ಯೇಕ ಧರ್ಮ ಕೇಳುವುದು ಎಷ್ಟು ಸರಿ. ಈ ರೀತಿ ಮಾಡಿದರೆ ಲಿಂಗಾಯತ ಧರ್ಮದ ಮಾನ್ಯತೆ ಕೊಡುವವರು ಯಾರು ? ಇದು ಹಿಂದೂಗಳನ್ನು ಒಡೆಯುವ ಷಡ್ಯಂತ್ರವಾಗಿದೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ನಡೆಯುತ್ತಿರುವುದು ಏಕತಾ ಸಮಾವೇಶ ಅಲ್ಲ. ಅದನ್ನು ಬೇಡ ಜಂಗಮರ ಸಮಾವೇಶ ಎಂದು ಕರೆಯುತ್ತೇವೆ. ನಾವು, ಸಿರಿಗೆರೆ ಶ್ರೀಗಳು ಸೇರಿದಂತೆ ಬೇರೆ ಸಮಾಜದ ಶ್ರೀಗಳು ಸಹ ಅಲ್ಲಿಗೆ ಹೋಗುತ್ತಿಲ್ಲ ಎಂದು ತಿಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now