Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಷ್ಯಾದ ವಿರುದ್ಧ ತಿರುಗಿ ಬಿದ್ದಿದ್ದ ವ್ಯಾಗನಾರ್ಪಡೆ ಇದ್ದಕ್ಕಿದ್ದಂತೆ ಸೈಲೆಂಟ್..!

Facebook
Twitter
Telegram
WhatsApp

ಇಷ್ಟು ದಿನ ರಷ್ಯಾದ ಪರ ಯುದ್ಧ ಮಾಡುತ್ತಿದ್ದಂತ ವ್ಯಾಗ್ನರ್ ಪಡೆ ಇದ್ದಕ್ಕಿದ್ದ ಹಾಗೆ ರಷ್ಯಾದ ವಿರುದ್ಧ ತಿರುಗಿ ಬಿದ್ದಿದ್ದು, ಜಗತ್ತಿನ ಅತ್ಯಂತ ಸುದ್ದಿ ಆಗಿತ್ತು. ಆದರೆ ರಾತ್ರೋರಾತ್ರಿ ಯಾಕೋ ದಿಢೀರ್ ಅಂತ ತನ್ನ ನಿರ್ಧಾರವನ್ನು ಬದಲಿಸಿದ್ದು ಈಗ ಸೈಲೆಂಟ್ ಆಗಿದೆ. ವ್ಲಾಡಿಮರ್ ಪುಟಿನ್ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ರಷ್ಯಾದ ವಿರುದ್ಧವೇ ಯುದ್ಧ ಸಾರುವುದಕ್ಕೆ ಸನ್ನದ್ಧವಾಗಿತ್ತು. ಶನಿವಾರದ ರಾತ್ರಿವರೆಗೆ ಮಾಸ್ಕೋದತ್ತ ಮುನ್ನುಗ್ಗುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಸಂಜೆಯೊಳಗೆ ವ್ಯಾಗ್ನಿಮರ್ ಪಡೆ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡಿದೆ.

ರಷ್ಯಾದಲ್ಲಿ ಆಂತರಿಕ ಕಿತ್ತಾಟ ನಡೆಯುತ್ತಿದೆ‌ ಎಂದು ತಿಳಿದ ತಕ್ಷಣ ರಷ್ಯಾ ಸ್ನೇಹಿತವಾದ ಬೆಲರೂಸ್ ಸಂಧಾನಕ್ಕೆ‌ ಮುಂದಾಗಿದೆ. ಇಬ್ಬರ ನಡುವೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಮಾಸ್ಕೋ​ದತ್ತ ಮುನ್ನು​ಗ್ಗ​ದೆ ದಾಳಿ ನಿಲ್ಲಿ​ಸಲು ನಮ್ಮ ಸೈನಿಕರಿಗೆ ನಾವು ಸೂಚಿಸಿದ್ದೇವೆ. ರಕ್ತಪಾತ ನಮಗೆ ಇಷ್ಟವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.

ಒಂದು ನಗರ ನಮ್ಮ ಕೈತ​ಪ್ಪಿದೆ. ಬಂಡಾಯ ಏಳುವವರ, ಬೆನ್ನಿಗೆ ಚೂರಿ ಹಾಕಿ​ದ​ವ​ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಶಸ್ತ್ರ ಪಡೆಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇಂಥ ಸಶಸ್ತ್ರ ಬಂಡಾಯದಿಂದ ದೇಶವನ್ನು ರಕ್ಷಿಸಿಕೊಳ್ಳಲು ನಾವು ಬದ್ಧ ಮತ್ತು ಸಿದ್ಧರಾಗಿದ್ದೇವೆ ಎಂದು ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!