ಸಂಘ ರಚನೆಯಾಗಿರುವುದು ಯಾರ ವಿರುದ್ಧವೂ ಹೋರಾಟ ನಡೆಸುವುದಕ್ಕಲ್ಲ : ಬಿ.ವಿ. ಪ್ರಶಾಂತ

1 Min Read

 

ಚಿತ್ರದುರ್ಗ, (ಸೆ.25) :  ಸಂಘ ರಚನೆಯಾಗಿರುವುದು ಯಾರ ವಿರುದ್ಧ ಹೋರಾಟ ನಡೆಸುವುದಕ್ಕಲ್ಲ ಸದಸ್ಯರ ನಿರ್ಣಯದಂತೆ ನೌಕರರ ಬೇಡಿಕೆಯ ಕುರಿತು ಬ್ಯಾಂಕಿನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲು ಎಂದು ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ವಿ. ಪ್ರಶಾಂತ ಹೇಳಿದರು.

ನಗರದ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಯಲ್ಲಿ
ಬ್ಯಾಂಕ್ ನೌಕರರ ಸಂಘದ 2021-2022 ಸಾಲಿನ ಒಂದನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನೌಕರರ ಸಂಘ, ರೆಡ್ ಕ್ರಾಸ್, ಇನ್ನರ್ ವೀಲ್ ,ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಬ್ಯಾಂಕಿನ 25 ಜನ ನೌಕರರು ರಕ್ತದಾನ ಮಾಡಿದರು.ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಬೆಂಗಳೂರು ಇವರು ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿದರು.
ಡಾ. ಕೆ. ದೀಪಕ್  ಮಾನಸಿಕ ಒತ್ತಡ ನಿವಾರಣೆ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ ಡಿ ಹಳೇಮನಿ, ಸಂಘದ ನಿರ್ದೇಶಕರುಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತ ರಿದ್ದರು.

Share This Article
Leave a Comment

Leave a Reply

Your email address will not be published. Required fields are marked *