Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುಗಾದಿ ಕವಿತೆ : ಯುಗಾದಿ ಎಂದರೆ ಹೊಸತನದ ಸಂಕೇತ : ಬಾಲಾಜಿ

Facebook
Twitter
Telegram
WhatsApp

ಪ್ರಕೃತಿಯ ಸಿರಿಮುಡಿಗೆ
ಕಳೆಕಟ್ಟಿದೆ
ಪ್ರಕೃತಿಯೇ ತೋರಣ ಕಟ್ಟಿ
ಸಜ್ಜಾಗಿ ನಿಂತಿದೆ

ಎಲ್ಲೆಲ್ಲೂ ನವೋಲ್ಲಾಸ
ನವಚೈತನ್ಯ ತುಂಬಿದೆ
ಮಾವು-ಬೇವು ಹಚ್ಚಹಸಿರು
ಹೊತ್ತು ಸಾಗಿದೆ

ನವ ವಸಂತನ
ಆಗಮನ
ದುಂಬಿಯ ಝೇಂಕಾರ
ಚಂದ್ರಮಾನ

ನವ ವಧುವಿನಂತೆ
ನಿಸರ್ಗದ ಶೃಂಗಾರ
ತನ್ನ ನಲ್ಲವಸಂತನಾಗಮನದ
ಕಾತುರ

ಅನ್ನದಾತನ ಮೊಗದಲಿ
ಮುಗುಳ್ನಗೆಯ ಹೊಂಬೆಳಕು
ನೂತನ ವರ್ಷಾರಂಭದ
ಯುಗಾದಿಯ ಹೊಸಬೆಳಕು

ಸೃಷ್ಟಿಕರ್ತ ಬ್ರಹ್ಮದೇವ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ
ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ
ಪಟ್ಟಾಭಿಷೇಕವಾದ ಸುದಿನ

ಮನೆಮಂದಿಯೆಲ್ಲ
ನಸುಕಿನಲ್ಲೆದ್ದು
ಅಭ್ಯಂಜನ ಸ್ನಾನದಿಂದ
ಮಿಂದೆದ್ದು

ಮನೆಯ ಬಾಗಿಲಿಗೆ ಮಾವಿನ ಎಲೆ ಬೇವಿನ ಎಲೆಯ ತೋರಣ
ಮನೆಯೊಳಗೆ
ಕಡಲೆಬೇಳೆ ಹೋಳಿಗೆ ಹೂರಣ

ಯುಗಾದಿ ಎಂದರೆ
ಹೊಸತನ ಸಂಕೇತ
ಪ್ರಕೃತಿಯಲ್ಲಿ ಸಂವತ್ಸರದಲ್ಲಿ
ಕಾಣುವೆವು ಹೊಸತನ

ಬೇವು-ಬೆಲ್ಲ
ಸುಖ ದುಃಖಗಳ ಸಂಕೇತ
ಎರಡನ್ನೂ ಸಮಾನವಾಗಿ ಸ್ವೀಕರಿಸ ಬೇಕಂತ

ಬಾಲಾಜಿ, ನಾಗಲಕ್ಷ್ಮಿ ಹಾರ್ಡ್ವೇರ್

Facebook
Twitter
Telegram
WhatsApp
suddionenews

suddionenews

Leave a Comment

Top Stories

Curd in Summer : ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ ಗೊತ್ತಾ ?

ಸುದ್ದಿಒನ್ :  ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಕಡಿಮೆ ಸೇವಿಸಿದರೆ ಒಳ್ಳೆಯದು.  ಬದಲಾಗಿ, ಲಘು ಆಹಾರವನ್ನು ಸೇವಿಸಿದರೆ ಬಿಸಿಲಿನ ಪ್ರಭಾವ ಅಷ್ಟಾಗಿ ಬೀರುವುದಿಲ್ಲ. ಅನೇಕ ಜನರು ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರು ತಿನ್ನುತ್ತಾರೆ. ಪ್ರತಿನಿತ್ಯ ಬೇಸಿಗೆಯಲ್ಲಿ ಮೊಸರು

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ?

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ? ಭಾನುವಾರ-ಮೇ-5,2024 ಸೂರ್ಯೋದಯ: 05:51, ಸೂರ್ಯಾಸಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

error: Content is protected !!