ಚಿತ್ರದುರ್ಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವರ್ಗಾವಣೆ ; ಸಾರ್ವಜನಿಕರ ಪ್ರತಿಭಟನೆ, ಮನವಿ

1 Min Read

 

                       ವರದಿ ಮತ್ತು ಫೋಟೋ ಕೃಪೆ                          ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.27): ಗೋಪಾಲಪುರ ರಸ್ತೆಯ ಮಾರುತಿ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮಂಜುನಾಥ್‍ರವರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಸ್ಪೂರ್ತಿ ವಿನಾಯಕ ಸೇವಾ ಸಾಂಸ್ಕೃತಿಕ ಕಲಾ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಮಂಜುನಾಥ್ ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿ ಬಡವರ ವೈದ್ಯರೆಂದೆ ಪ್ರಸಿದ್ದಿಯಾಗಿದ್ದರು.

ಇವರ ವರ್ಗಾವಣೆಯಿಂದ ಭೋವಿ ಕಾಲೋನಿ, ಮಾರುತಿ ನಗರ, ಆಜಾದ್ ನಗರ, ಹಿಮ್ಮತ್‍ನಗರ, ಗೋಪಾಲಪುರ, ದರ್ಜಿ ಕಾಲೋನಿಯ ಬಡವರು ಚಿಕಿತ್ಸೆ ಪಡೆದುಕೊಳ್ಳಲು ಪರದಾಡುವಂತಾಗಿದೆ. ಹಾಗಾಗಿ ಡಾ.ಮಂಜುನಾಥ್‍ರವರ ವರ್ಗಾವಣೆಯನ್ನು ರದ್ದುಪಡಿಸಿ ಪುನಃ ಅಲ್ಲಿಗೆ ನೇಮಕಗೊಳಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಎನ್.ಚಂದ್ರಶೇಖರ್, ಸಂದೀಪ್, ಉದಯಪ್ರಸಾದ್, ರವಿಕುಮಾರ್, ಕೆ.ಬಿ.ಶ್ರೀನಿವಾಸ್, ವೆಂಕಟೇಶ್, ಎಂ.ಡಿ.ಸಾಧಿಕ್, ಕಮ್ರಾನ್, ಭೀಮಪ್ಪ, ಗಾಯಿತ್ರಮ್ಮ, ಹನುಮಂತಮ್ಮ, ಸಾದತ್, ಸಲ್ಮಾನ್ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *