Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಮೈಮರೆತ ಬಾಲಕರು : ರೈಲು ಹರಿದು ಸಾವು..!

Facebook
Twitter
Telegram
WhatsApp

ಲಕ್ನೋ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಉಪಯೋಗಿಸದವರು ಯಾರು ಇಲ್ಲ. ಎಂಥ ಪುಟ್ಟ ಪುಟ್ಟ ಮಕ್ಕಳ ಬಳಿಯೂ ಸ್ಮಾರ್ಟ್ ಫೋನ್ ಇರುತ್ತೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಆನ್ಲೈನ್ ಗೇಮ್ ಗಳಲ್ಲಿ ತಲ್ಲೀನರಾಗುತ್ತಿದ್ದಾರೆ. ಅದರಿಂದ ಅದೆಷ್ಟು ಅಪಾಯ ಅನ್ನೋದು ಮಕ್ಕಳಿಗೆ ಇನ್ನು ಸರಿಯಾಗಿ ತಿಳಿಯುತ್ತಿಲ್ಲ ಅನ್ನಿಸುತ್ತೆ. ಆದ್ರೆ ಆ ಆಟದಲ್ಲಿ ಮುಳುಗಿದ್ದ ಮಕ್ಕಳು ಒಂದೇ ಕ್ಷಣಕ್ಕೆ ಪ್ರಾಣ ಬಿಟ್ಟಿರುವಂಥ ದುರಂತ ಘಟನೆ ನಡೆದಿದೆ.

10 ತರಗತಿ ಓದುತ್ತಿದ್ದ ಆ ಇಬ್ಬರು ಬಾಲಕರು ರೈಲು ಹಳಿ ಮೇಲೆ ಒಬ್ ಜೀ ಗೇಮ್ ಆಡುತ್ತಾ ಕುಳಿತಿದ್ದಾರೆ. ಗೇಮ್ ನಲ್ಲಿ ಮುಳುಗಿದ್ದ ಇವರಿಗೆ ಹೊರಗಿನ ಯಾವುದೇ ಶಬ್ಧವೂ ಕೇಳಿಸಿಲ್ಲ. ಅಷ್ಟೆ ಯಾಕೆ ಅಷ್ಟು ಜೋರಾಗಿ ಶಬ್ಧ ಮಾಡುವ ಟ್ರೈನ್ ಬಂದರೂ ಕೇಳಿಸಿಲ್ಲ. ಮಧಯರಾ – ಕಸಗಂಜ್ ರೈಲು ಇಬ್ಬರು ಬಾಲಕರ ಮೇಲೆ ಹರಿದಿದೆ. ಬಾಲಕರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಗೌರವ್ ಮತ್ತು ಕಪಿಲ್ ಎಂಬ ಇಬ್ಬರು ಬಾಲಕರು ಮೃತರು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬಾಲಕರಿಬ್ಬರು ಪಬ್ ಜೀ ಗೇಮ್ ಆಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಜಮಾನಾಪುರ ಠಾಣೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಮೊಬೈಲ್ ಬಳಕೆ ವಿಚಾರದಲ್ಲಿ ಪೋಷಕರು ಕೂಡ ಎಚ್ಚರವಹಿಸಬೇಕಾದದ್ದು ತುಂಬಾ ಅನಿವಾರ್ಯತೆಯಾಗಿದೆ. ದೇಶದಲ್ಲಿ ಪಬ್ ಜೀ ಬ್ಯಾನ್ ಆಗಿದ್ದರು ಆ ಮಕ್ಕಳ ಮೊಬೈಲ್ ಗೆ ಗೇಮ್ ಸಿಕ್ಕಿದ್ದು ಇನ್ನು ದುರದೃಷ್ಟಕರ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ : ನೇಹಾ ತಂದೆ ನಿರಂಜನ ಹಿರೇಮಠ ಆಕ್ರೋಶ

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಬಾಳಿ ಬದುಕಬೇಕಿದ್ದ, ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ನೇಹಾಳನ್ನು ಕ್ರೂರವಾಗಿ ಕೊಂದಿದ್ದಾನೆ ಫಯಾಜ್. ಆದರೆ ಇನ್ನು ಆ ನೋವು ಯಾರಲ್ಲಿಯೂ ಕಡಿಮೆಯಾಗಿಲ್ಲ, ಆ ಘಟನೆ ಇನ್ನು ಕಣ್ಣಿಗೆ ಕಟ್ಟಿದಂತೆಯೆ ಇದೆ. ಹೀಗಿರುವಾಗ

ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷೆ ಆರತಿ ಚಿತ್ರದುರ್ಗ ನಗರಕ್ಕೆ ಭೇಟಿ ಯೋಗ, ಪ್ರಾಣಾಯಾಮ ಕುರಿತು ಮಾಹಿತಿ

ಚಿತ್ರದುರ್ಗ: ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷರಾದ ಆರತಿ ಮತ್ತು ವಿಭಾಗೀಯ ಮಟ್ಟದ ಪದಾಧಿಕಾರಿ ಜ್ಯೋತಿ ಅವರು ಚಿತ್ರದುರ್ಗ ನಗರಕ್ಕೆ ಮಂಗಳವಾರ ಭೇಟಿ ನೀಡಿದರು. ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯ

ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ : ಸಿಎಂ ಸಿದ್ದರಾಮಯ್ಯ ಅವರಿಗೆ ವಿಜಯೇಂದ್ರ ತಿರಗೇಟು

ರಾಜ್ಯ ಬಿಜೆಪಿ ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ

error: Content is protected !!