Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಡಿ ಮಾಡಿಸೋದು, ಎಡಿಟ್ ಮಾಡಿಸೋ ಹಲ್ಕಾ ಕೆಲಸ ಮಾಡುತ್ತಿದ್ದಾರೆ.. ಅದರಲ್ಲಿ ನಮ್ಮವರು ಇದ್ದಾರೆ : ಯತ್ನಾಳ್ ಆಕ್ರೋಶ

Facebook
Twitter
Telegram
WhatsApp

ವಿಜಯಪುರ: ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಅದು ತಪ್ಪು ಇದೆಯೋ ಇಲ್ಲವೋ ತನಿಖೆ ಆದ ಮೇಲೆ ತಿಳಿಯುತ್ತೆ.ಪೂರ್ವಾಪರ ತಿಳಿಯದೆ ಕಾಂಗ್ರೆಸ್ ನವರು ಬಹಳ ಮೂರ್ಖತನದ ಹೇಳಿಕೆ ಕೊಡುತ್ತಿದ್ದಾರೆ. ಎಸ್ಟಿಮೇಟ್ ಆಗದೆ, ವರ್ಕ್ ಆರ್ಡರ್ ಇಲ್ಲದೆ ಹೋದರೆ ಅಷ್ಟು ಕೋಟಿ ಕೆಲಸ ಹೇಗೆ..? ನಾನೇ ಎಂಎಲ್ಎ ಇದ್ದೀನಿ ನಮ್ಮ ಅಧಿಕಾರಿಗಳು ಐದು ಲಕ್ಷದ ಕೆಲಸ ಮಾಡಿ ಅಂದರು ಅವರು ಮಾಡುವುದಿಲ್ಲ. ಮೊದಲು ಅಪ್ರೂವ್ ಆಗಬೇಕು. ರೆಕಾರ್ಡ್ ನಲ್ಲಿ ಕಾಣಿಸಬೇಕು ಅಂತಾರೆ.

ಅಲ್ಲಿನ ಕಾಂಗ್ರೆಸ್ ಶಾಸರು ಯಾರು..? ಶ್ರೀಮತಿ ಹೆಬ್ಬಾಳ್ಕರ್ ಅವರು. ನಾನು ಕೇಳುತ್ತೀನಿ. ಐದು ಕೋಟಿಯಲ್ಲಿ ನಿಮ್ಮ ಮತ ಕ್ಷೇತ್ರದಲ್ಲಿ ಕೆಲಸ ಆಗಿಬಿಡುತ್ತೇನು..? ಏನು ಮಾಡುತ್ತಾರೆ. ಡಿಕೆ ಶಿವಕುಮಾರ್ ಜೊತೆ ಸೇರಿ ಬಾಯಿಗೆ ಬಂದಂಗೆ ಮಾಡೋದಲ್ಲ. ಎಂಎಲ್ಎ ಆಗಿ ಏನ್ ಮಾಡ್ತೀರಿ..? ಎಂದು ಪ್ರಶ್ನಿಸಿದ್ದಾರೆ.

ಇದೆ ವೇಳೆ ಕಾಂಗ್ರೆಸ್ ಹಾಗೂ ತಮ್ಮ ಪಕ್ಷದಲ್ಲೆ ಇರುವ ಹಲವರ ಮೇಲೆ ಗರಂ ಆದ ಯತ್ನಾಳ್, ಸಿಡಿ ಮಾಡಿಸೋದು, ಎಡಿಟ್ ಮಾಡಿಸೋದು ಬ್ಲಾಕ್ ಮೇಲ್ ಮಾಡಿಸುವಂತ ಹಲ್ಕಾ ಕೆಲಸ ಮಾಡುತ್ತಿದ್ದಾರೆ. ಲೋಫರ್ ಗಳು ಇದ್ದಾರೆ. ಬಿಜೆಪಿ‌ ಹಾಗೂ ಕಾಂಗ್ರೆಸ್ ನಲ್ಲೂ ಇಂಥದ್ದೊಂದು ಟೀಂ ಇದೆ. ಮಹಾ ಕಳ್ಳ ನಮ್ಮಲ್ಲಿರುವ ಕಳ್ಳನಿಂದ ಇಂಥದ್ದೊಂದು ಕೆಲಸವಾಗುತ್ತಿದೆ. ಕರ್ನಾಟಕದ ರಾಜ್ಯ ಮುಂಚೆ ಮಾದರಿ ರಾಜ್ಯವಾಗಿತ್ತು. ಈಗ ಸಿಡಿ ಫ್ಯಾಕ್ಟರಿ ಆಗಿದೆ ಎಂದು ಆಕ್ರೋಶಗೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!