ನಾಳೆ ಗಾಂಧಿ ಜಯಂತಿ.. ಇಂದು ಸ್ವಚ್ಛತಾ ಕಾರ್ಯಕ್ರಮ : ವಿಶೇಷ ಆಂದೋಲನಕ್ಕೆ ನೀವೂ ಕೈಜೋಡಿಸಿ

ನವದೆಹಲಿ: ಗಾಂಧಿ ಜಯಂತಿಗಾಗಿ ಇಂದಿನಿಂದಾನೇ ತಯಾತಿ ನಡೆಯುತ್ತಿದೆ. ಈ ಬಾರಿಯೂ ಅರ್ಥ ಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ದೇಶದೆಲ್ಲೆಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರ ಮೊಬೈಲ್ ನಲ್ಲೂ ಕಳೆದ ಒಂದು ವಾರದಿಂದ ಸ್ವಚ್ಛತಾ ಅಭಿಯಾನದ ಬಗ್ಗೆ ಅಲರ್ಟ್ ಮಾಡಲಾಗುತ್ತಿತ್ತು.

ನಾಳೆ ಗಾಂಧಿ ಜಯಂತಿ. ಗಾಂಧೀಜಿಯವರ 154ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂದು ಸ್ವಚ್ಛತಾ ಅಭಿಯಾನ ಶುರುವಾಗಿದೆ. ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗ್ಗೆಯೇ ಅಭಿಯಾನ ಆರಂಭವಾಗಿದ್ದು ಒಂದು ಗಂಟೆಗಳ ಕಾಲ ಸ್ವಚ್ಛತೆಯನ್ನು ಮಾಡಲಾಗುತ್ತದೆ.

ಅಂಗನವಾಡಿ, ಬಸ್ ನಿಲ್ದಾಣ, ಮಾರುಕಟ್ಟೆ, ಗೋಶಾಲೆಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅಷ್ಟೆ ಅಲ್ಲ ಬಯಲು ಮುಕ್ತ ಶೌಚಾಲಯಕ್ಕೂ ಈ ಅಭಿಯಾನದಲ್ಲಿ ಕೂಜೋಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಇಂದು ಸ್ವಚ್ಛತಾ ಕಾರ್ಯ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *