ಬೆಂಗಳೂರು; ಸಾಲುಮರದ ತಿಮ್ಮಕ್ಕ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಅವರು ಮಾಡಿದ ತ್ಯಾಗ ಗೊತ್ತೆ ಇದೆ. ಮರಗಳನ್ನೇ ತಮ್ಮ ಜೀವನ ಎಂದುಕೊಂಡು ಬದುಕಿದವರು. ಮರಗಳನ್ನೇ ಮಕ್ಕಳೆಂದು ಸಾಕಿದವರು. ಅವರ ಬಗ್ಗೆ ಎಲ್ಲರು ತಿಳಿದಿದ್ದಾರೆ. ಆದರೆ ಅವರ ಬಗ್ಗೆ ಸಿನಿಮಾ ಮಾಡುವುದಕ್ಕೆ ತಂಡವೊಂದು ಹೊರಟಿತ್ತು. ಅದಕ್ಕೆ ಹಿನ್ನಡೆಯಾಗಿದೆ. ಇಂದು ಸಾಲುಮರದ ತಿಮ್ಮಕ್ಕ ಇದಕ್ಕೆ ವಿರೋಧ ವ್ಯಕ್ಯಪಡಿಸಿದ್ದಾರೆ.
ಈ ಬಗ್ಗೆ ಸಾಲುಮರದ ತಿಮ್ಮಕ್ಕರ ಮಗ ಉಮೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಬಯೋಪಿಕ್ ಮಾಡ್ತೇವೆ ಅಂತ ಸಾಕಷ್ಟು ನಿರ್ದೇಶಕರು ಬಂದಿದ್ದರು. ಆದರೆ ನಾವೂ ಮಾಡೋದು ಬೇಡ ಅಂತಾನೇ ಹೇಳಿದ್ದೇವು. ದಿಲೀಪ್ ಕೂಡ ಮಾಡ್ತೀವಿ ಎಂದು ಬಂದಾಗ ಅವರಿಗೂ ಬೇಡ ಎಂದು ಹೇಳಿದ್ದೇವು. ಈ ತಂಡಕ್ಕೆ ನಾವೂ ಸಿನಿಮಾ ಮಾಡುವುದಕ್ಕೆ ಬಿಡಲ್ಲ ಎಂದು ತಿಳಿಸಿದ್ದಾರೆ. ವೃಕ್ಷಮಾತೆ ಸಿನಿಮಾ ಮೂಲಕ ಸಾಲುಮರದ ತಿಮ್ಮಕ್ಕನ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದ ತಂಡಕ್ಕೆ ಈಗ ಹಿನ್ನಡೆಯಾಗಿದೆ.

ದೂರು ಸ್ವೀಕರಿಸಿದ ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು, ಸಾಲುಮರದ ತಿಮ್ಮಕ್ಕ ಬಂದು ದೂರು ನೀಡಿದ್ದಾರೆ. ನನ್ನ ಅನುಮತಿ ಇಲ್ಲದೆ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಮನವಿಗೆ ನಾವೂ ಸ್ಪಂದಿಸುತ್ತೇವೆ. ವೃಕ್ಷಮಾತೆ ಎಂಬ ಟೈಟಲ್ ನಮ್ಮಲ್ಲಿ ಇನ್ನು ರಿಜಿಸ್ಟರ್ ಆಗಿಲ್ಲ. ಸಿನಿಮಾ ತಂಡದವರನ್ನು ಕರೆಸಿ ಆ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ. ವೃಕ್ಷಮಾತೆ ಸಿನಿಮಾ ಅದಾಗಲೇ ಚಿತ್ರೀಕರಣವನ್ನು ಶುರು ಮಾಡಿತ್ತು. ಆದರೆ ಶೂಟಿಂಗ್ ಸಮಯದಲ್ಲೂ ಸ್ಟೇಷನ್ ಗೆ ಕರೆಸಿ ಎಚ್ಚರಿಕೆಯನ್ನು ನೀಡಲಾಗಿತ್ತು.

















