ಕೊಡಗಿನಲ್ಲಿ ಬಾಲಕಿಯನ್ನು ಕೊಂದವ ಸತ್ತಿಲ್ಲ ಬದುಕಿದ್ದಾನೆ : ಪೊಲೀಸರ ಅತಿಥಿಯಾದ ಪ್ರಕಾಶ್..!

suddionenews
1 Min Read

ಕೊಡಗಿನ ಸೂರ್ಲಬಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾರನ್ನ ಪ್ರಕಾಶ್ ಎಂಬಾತ ರುಂಡ, ಮುಂಡ ಕತ್ತರಿಸಿ ಕ್ರೂರವಾಗಿ ಹತ್ಯೆ ಮಾಡಿದ್ದ. ನಿನ್ನೆಯೇ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಇದೀಗ ಆತ ಸತ್ತಿಲ್ಲ ಬದುಕಿದ್ದಾನೆ ಎಂಬುದು ತಿಳಿದು ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಾಲಕಿಯ ಇಡೀ ದೇಹ ಪತ್ತೆಯಾಗಿತ್ತು. ಆದರೆ ರುಂಡ ಮಾತ್ರ ಸಿಕ್ಕಿರಲಿಲ್ಲ. ಇದೀಗ ರುಂಡವನ್ನು ತೆಗೆದುಕೊಂಡು ಹೋಗಿದ್ದ ಪ್ರಕಾಶ್ ಸಿಕ್ಕಿದ್ದಾನೆ.

ಪ್ರಕಾಶ್ ಕಾಡಿನಲ್ಲಿ ಪತ್ತೆಯಾಗಿದ್ದು, ಸೋಮವಾರಪೇಟೆ ಪೊಲೀಸರು ಆತನನ್ನು ಕರೆತರುತ್ತಿದ್ದಾರೆ. ರುಂಡ ಮತ್ತು ಕೋವಿಯೊಂದಿಗೆ ನಾಪತ್ತೆಯಾಗಿದ್ದಾತ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೀನಾ ಮೊನ್ನೆ ತಾನೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮುಗಿಸಿದ್ದಳು. ಮುಂದಿನ ಶಿಕ್ಷಣದ ಕನಸ್ಸನ್ನು ಕಾಣುತ್ತಿದ್ದಳು. ಆದರೆ ಅಷ್ಟರಲ್ಲೇ ಕನಸ್ಸನ್ನು ನುಚ್ಚು ನೂರು ಮಾಡುವುದಲ್ಲದೆ, ಅವಳ ಜೀವವನ್ನೇ ಬಲಿ ಪಡೆದು ಬಿಟ್ಟ. ಮಗಳನ್ನು ಅಷ್ಟು ಕ್ರೂರವಾಗಿ ಹತ್ಯೆ ಮಾಡಿರುವುದನ್ನು ಕಂಡು ತಂದೆ-ತಾಯಿ ಕೊರಗುತ್ತಿದ್ದಾರೆ.

ಅದೇ ಊರಿನ ಪ್ರಕಾಶ್, ಮೀನಾಳನ್ನು ಪ್ರೀತಿಸುತ್ತಿದ್ದನಂತೆ. ಇತ್ತಿಚೆಗೆ ನಿಶ್ವಿತಾರ್ಥ ಕೂಡ ಮಾಡಿಕೊಳ್ಳಲು ಹೋಗಿದ್ದಾನೆ. ಆದರೆ ಆಗ ಪೊಲೀಸರಿಗೆ ವಿಷಯ ತಿಳಿದು, ಅದನ್ನು ತಡೆದಿದ್ದಾರೆ. ಅಪ್ರಾಪ್ತ ಬಾಲಕಿಗೆ ಮದುವೆ ಮಾಡುವುದು ಅಪರಾಧ. ಇನ್ನೆರಡು ವರ್ಷ ತುಂಬಿದ ಮೇಲೆ ಮದುವೆ ಮಾಡಿಕೊಳ್ಳಲು ಹೇಳಿದ್ದಾರೆ. ಆಗ ಸುಮ್ಮನಾದ ಪ್ರಕಾಶ್ ಎಸ್ಎಸ್ಎಲ್ಸಿ ಫಲಿತಾಂಶ ಬಂದೊಡನೆ ಮನೆಗೆ ಬಂದು, ಮೀನಾಳನ್ನು ಎಳೆದೊಯ್ದುದ್ದಾನೆ. ನಿರ್ಜನ ಪ್ರದೇಶದಲ್ಲಿ ರುಂಡ, ಮುಂಡ ಕತ್ತರಿಸಿ, ರುಂಡ ಮಾತ್ರ ಎತ್ತಿಕೊಂಡು ಹೋಗಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದಾಗ ಇಂದು ಕಾಡಿನಲ್ಲಿ ಪತ್ತೆಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *