ಶಿವಮೊಗ್ಗ: ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಪ್ರಿಯತಮೆಯ ಪ್ರಾಣವನ್ನ ಪ್ರಿಯಕರನೇ ತೆಗೆದ ಘಟನೆ ಭದ್ರಾವತಿಯ ಯಕ್ಕುಂದ ಗ್ರಾಮದ ಬಳಿ ನಡೆದಿದೆ. ಸೂರ್ಯ ಎಂಬಾತ ತನ್ನ ಪ್ರೇಯಸಿ ಸ್ವಾತಿಯನ್ನ ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಸ್ವಾತಿ ಪೋಷಕರು ಸೂರ್ಯ ಹಾಗೂ ಆತನ ತಂದೆಯ ಮೇಲೆ ದೂರು ನಿಡೀದ್ದು, ಈಗಾಗಲೇ ಪೊಲೀಸರು ತಂದೆ ಮಗನನ್ನ ವಶಕ್ಕೆ ಪಡೆದಿದ್ದಾರೆ.
ಮಗಳ ಸಾವುನ ಬಗ್ಗೆ ಸ್ವಾತಿ ತಂದೆ ಹಲವು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಹುಡುಗನಿಗೂ ಹುಡುಗಿಗೂ ಮಾತು ಕೊಟ್ಟಿದ್ದೆವು. ಮಾಡಿಕೊಡ್ತೇವೆ ಆದ್ರೆ ಮೊದಲು ಓದು ನೀ ಅಂತ. ಅವಳಿಗೆ ಫೋನ್ ಮಾಡಿ, ತಲೆಕೆಡಿಸಿದ್ದಾನೆ. ಬಲವಂತದಿಂದಾನೇ ಮನೆಯಿಂದ ಕರೆದುಕೊಂಡು ಹೋಗಿ, ಚಾನೆಲ್ ಗೆ ದೂಕಿದ್ದಾನೆ. ಸಣ್ಣ ಮಗಿನಿಂದ ಎಷ್ಟು ಕಷ್ಟ ಪಟ್ಟು ಸಾಕಿದ್ದೀವಿ ಇದಕ್ಕೆ ನ್ಯಾಯ ಬೇಕು.
ಬಡ ಕುಟುಂಬದಿಂದ ಬಂದವರು ನಾವೂ. ಫೋನ್ ಮಾಡಿ, ಮನೆಗೆ ಬಂದು ಬೈಕ್ ನಲ್ಲಿ ಕರೆದುಕೊಂಡು ಹೊಇಗಿದ್ದ. ಗ್ರಾಮದಲ್ಲಿನ ಜನರೇ ಹೇಳಿದರು. ಆಗ ಮಗಳನ್ನ ಹುಡುಕುವುದಕ್ಕೆ ಶುರು ಮಾಡಿದೆವು. ದನ ಕರ ಮೇಯಿಸುವವರೆಲ್ಲ ಹೇಳಿದರು. ಈ ರೀತಿ ವಾದ ನಡೀತಾ ಇತ್ತು. ಹುಡುಗಿ ನೀರಲ್ಲಿ ಹೋಗ್ಬಿಟ್ಟಳು ಅಂತ ಹೇಳಿದರು. ಆದರೆ ಅವನು ಉಳಿದುಕೊಂಡು ಬಿಟ್ಟಿದ್ದ ಎಂಬುದನ್ನ ಹೇಳಿದ್ದಾರೆ. ಜೊತೆಗೆ ಇದಕ್ಕಾಗಿ ನ್ಯಾಯ ಬೇಕೆ ಬೇಕು ಎಂದು ಒಟ್ಟು ಹಿಡಿದಿದ್ದಾರೆ.
ಸೂರ್ಯ ಹಾಗೂ ಸ್ವಾತಿ ನಡುವೆ ಭದ್ರಾ ಕಾಲುವೆಯ ಬಳಿಯೇ ಮದುವೆ ವಿಚಾರಕ್ಕೆ ಮಾತುಕತೆ ನಡೆದಿದೆ. ಆದ್ರೆ ಸೂರ್ಯ ಹೈಡ್ರಾಮಾ ಮಾಡಿದ್ದು, ನಾವಿಬ್ಬರು ವಿಷ ಕುಡಿದಿದ್ದೆವು. ಅವಳಿ ನೀರಿನಲ್ಲಿ ಮುಳುಗಿ ಸತ್ತಳು, ನಾನು ಬದುಕಿದೆ ಎಂದು ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






