ಜೈ ಶ್ರೀರಾಮ್ ಬಳಗದಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ.ಜನವರಿ.12 : ಮದಕರಿನಾಯಕ ವೃತ್ತದಲ್ಲಿ ಜೈ ಶ್ರೀರಾಮ್ ಬಳಗದಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಜೈ ಶ್ರೀರಾಮ್ ಬಳಗದವರು ಸಿಹಿ ಹಂಚಿದರು.

ಜೈ ಶ್ರೀರಾಮ್ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ ಭಾರತದ ಸಂಸ್ಕøತಿಯನ್ನು ಪಾಶ್ವಿಮಾತ್ಯ ದೇಶಗಳಲ್ಲಿ ಹರಡಿದ ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎನ್ನುವ ಸಂದೇಶವನ್ನು ಯುವ ಪೀಳಿಗೆಗೆ ನೀಡಿದ್ದಾರೆ. ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಇಂದಿನ ಯುವ ಜನಾಂಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಎ.ಪಿ.ರವಿ, ಪ್ರದೀಪ್‍ಕುಮಾರ್, ವಿರುಪಾಕ್ಷ, ಮೋಹನ್, ಸಂಜಯ್, ವಿನಯ್, ಪ್ರದೀಪ್, ಸುರೇಶ್, ದಿನೇಶ್, ಮಲ್ಲೇಗೌಡ್ರು, ಶ್ರೀಧರ್, ಆನಂದ್, ಮಾರುತಿ, ತಿಪ್ಪೇಶ್, ಮೋಹನ್, ಬಸವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *