ಮಂಡ್ಯಗೆ ಸುಮಲತಾ ಎಂಟ್ರಿ : ಕಾಂಗ್ರೆಸ್ ಮೇಲೆ ಆಕ್ರೋಶ ಹೊರ ಹಾಕಿದ ಬಿಜೆಪಿ ನಾಯಕರು

1 Min Read

 

ಮಂಡ್ಯ: ಮದ್ದೂರು ಪಟ್ಟಣದಲ್ಲಿ ಗಣಪತಿ ವಿಸರ್ಜನೆಯ ವೇಳೆ ನಡೆದ ಗಲಭೆಯಿಂದ ವಿಸರ್ಜನೆ ಅರ್ಧಕ್ಕೆ ನಿಂತಿತ್ತು. ಆದರೆ ಇಂದು ಬಿಜೆಪಿ ನಾಯಕರೆಲ್ಲರು ಮದ್ದೂರಿಗೆ ಭೇಟಿ ನೀಡಿ, ಸದ್ಯ ಗಣಪತಿಯ ವಿಸರ್ಜನೆಯೂ ಅದ್ದೂರಿಯಾಗಿ ನಡೆದಿದೆ. ಮದ್ದೂರು ಪಟ್ಟಣದಲ್ಲಿ ಗಣಪತಿ ಉತ್ಸವದ ವೇಳೆ ಸಾರ್ವಜನಿಕ ಸಭೆ ನಡೆಸಿದ ಬಿಜೆಪಿ ನಾಯಕರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅದರಲ್ಲೂ ಬಹಳ ಮುಖ್ಯವಾಗಿ ಸುಮಲತಾ ಅವರು ಈ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸರ್ಕಾರ ನಮ್ಮ ಜನರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಈಗ ಬರುತ್ತಿರುವ ಒಂದಷ್ಟು ನೊಂದ ಅಭಿಮಾನಿಗಳು ನನಗೆ ಅಡ್ಡ ಬಂದು ಹೇಳಿದರು. ಅಕ್ಕಾ ಅಂಬರೀಶ್ ಅಣ್ಣ ಇರಬೇಕಿತ್ತು. ಅವರಿದ್ದಿದ್ದರೆ ಈ ರೀತಿ ಆಗ್ತಾ ಇರಲಿಲ್ಲ. ನಮಗೆ ರಕ್ಷಣೆ ಬೇಕು. ನಾಯಕತ್ವ ಸರಿ ಇದ್ದರೆ ಕಾನೂನು ಸುವ್ಯವಸ್ಥೆ ಸರಿ ಇರುತ್ತದೆ. ಎಲ್ಲಿ ನಾಯಕತ್ವ ಇರಲ್ವೋ ಆಗ ಇಂಥ ಘಟನೆಗಳು ನಡೆಯುತ್ತವೆ. ಬಿಟ್ಟಿ ಭಾಗ್ಯಗಳಿಂದ ನಾವೂ ಏನು ಕಲಿತೆವಿ, ಅದರ ಹಿಂದಿನ ದುರುದ್ದೇಶ ಏನು ಅನ್ನೋದು ಗೊತ್ತಾಗಿದೆ ಎಂದಿದ್ದಾರೆ.

ಇದೇ ವೇಳೆ‌ಮಾತನಾಡಿರುವ ಆರ್ ಅಶೋಕ್, ವಡೆಗೆ ಮದ್ದೂರು ಫೇಮಸ್. ಡಿಕೆಶಿ, ಸಿದ್ದರಾಮಯ್ಯ ಈ ರೀತಿ ಮಾಡಿದ್ರೆ ಜನ ನಿಮ್ಮ ತಲೆ‌ ಮೇಲೆ ತಟ್ತಾರೆ. ಮಹಮ್ಮದ್ ಘಜ್ನಿ ಘೋರಿ ದಾಳಿ ನೋಡಿದ್ದೇವೆ. ಸಿದ್ದರಾಮಯ್ಯ ಬೇಕಾದ್ರೆ ಟೋಪಿ ಹಾಕಂಡು ಓಡಾಡಲಿ ಎಂದು ಹೌಹಾರಿದ್ದಾರೆ. ಅಶ್ಚತ್ಥ್ ನಾರಾಯಣ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಲೈಕೆ ರಾಜಕಾರಣ ಮಾಡ್ತಾ ಇದೆ. ನಮ್ಮ ತಾಳ್ಮೆಯನ್ನ ಪರೀಕ್ಷೆ ಮಾಡ್ತಿದೆ. ಪೊಲೀಸ್ ಠಾಣೆಯನ್ನು ಸುಡಲು ಹೋದವರು ಈ ಮುಸ್ಲಿಂ. ಇಂತಹವರ ಮೇಲೆ ಕೇಸ್ ಹಾಕುವುದಕ್ಕೆ ಹಿಂಜರಿಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article